“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ




ಭಾರತೀಯ ಸಾಂಸ್ಕೃತಿಕ ವೇದಿಕೆ  ಅಭಿರುಚಿ  ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್  ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ ಜನತೆಗೆ ಚಿರಪರಿಚಿತರು. ಅವರ ಉಪನ್ಯಾಸವಿರಲಿ,ಕಾವ್ಯವಾಚನಕ್ಕೆ ವ್ಯಾಖ್ಯಾನವಿರಲಿ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ತರುವುದು ನಿಶ್ಚಿತ. ಅದರಲ್ಲೂ ಗಣೇಶ್ ಅವರ ಅಷ್ಟಾವಧಾನವೆಂದ ಮೇಲೆ ಕೇಳಬೇಕೆ ...?! ಸುವರ್ಣ ಸಾಂಸ್ಕೃತಿಕ ಭವನ ಪ್ರೇಕ್ಷಕರಿಂದ ತುಂಬಿಹೋಗಿತ್ತು.ಸ್ಥಳಾಭಾವದ ನಿಮಿತ್ತ ಅನೇಕ ಮಂದಿ ನೆಲದ ಮೇಲೆ, ಮೆಟ್ಟಿಲುಗಳ ಮೇಲೆ ಕುಳಿತು ಕಾರ್ಯಕ್ರಮದ ಸವಿಯನ್ನು ಆಸ್ವಾದಿಸಿದ್ದು, ಈ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಆಸಕ್ತಿ, ಕುತೂಹಲವನ್ನು ವ್ಯಕ್ತಪಡಿಸಿತು. ’ಅಷ್ಟಾವಧಾನ’ ವೆಂಬುದು ಒಂದು ಅಪರೂಪದ ಕಲೆ. ಇದರಲ್ಲಿ ಅವಧಾನಿಯು ಪುಸ್ತಕ,ಪೆನ್ನು ಮುಂತಾದ ಬರವಣೆಗೆಯ ಸಾಮಾಗ್ರಿಗಳನ್ನು ಬಳಸುವಂತಿಲ್ಲ.ಇಲ್ಲವನ್ನೂ ತನ್ನ ಮಸ್ತಕದಲ್ಲೇ ನೆನಪಿಟ್ಟುಕೊಂಡು ತನ್ನ ಪಾಂಡಿತ್ಯವನ್ನು ಮೆರೆಯಬೇಕು. ಎಂಟು ಜನ ಪೃಚ್ಛಕರು ಹಾಕಿದ ಸವಾಲುಗಳನ್ನು ತನ್ನ ಮನಸ್ಸಿನಲ್ಲೇ ನೆನಪಿಟ್ಟುಕೊಂಡು, ಅವರವರು ಕೇಳಿದ ವಿಷಯದ ಮೇಲೆ, ಕೇಳಿದ ಛಂಧಸ್ಸಿನಲ್ಲಿ ಕಾವ್ಯ ರಚಿಸಿ, ಸಂಖ್ಯಾಬಂಧ ಬಿಡಿಸಿ ತನ್ನ ಭಾಷಾ ಪಾಂಡಿತ್ಯವನ್ನು ಮೆರೆಯಬೇಕು. ತಮ್ಮ ಪರಿಶ್ರಮ, ಅಪಾರವಾದ ಪ್ರತಿಭೆ ಮತ್ತು ಬಹು ಭಾಷಾ ಪಾಂಡಿತ್ಯದಿಂದ ಈ ಕಲೆಯನ್ನು ಉಳಿಸಿ-ಬೆಳೆಸಿದ ಕೀರ್ತಿ ಶ್ರೀ ಗಣೇಶ್ ಅವರಿಗೆ ಸಲ್ಲುತ್ತದೆ. ಈ ಕಾರ್ಯಕ್ರಮದಲ್ಲಿ ಶ್ರೀಯುತರು ತಮಗಿರುವ ಅಪಾರವಾದ ವಿಧ್ವತ್ತನ್ನು ಪ್ರದರ್ಶಿಸುವುದರೊಂದಿಗೆ ತಮ್ಮಲ್ಲಿರುವ ಏಕಾಗ್ರತೆ,ಸಮಯಸ್ಫೂರ್ತಿ,ಹಾಸ್ಯಪ್ರಙ್ಞೆ ಯನ್ನೂ ತೋರಿ ಪ್ರೇಕ್ಷಕರ ಗಮನ ಅತ್ತಿತ್ತ ಸುಳಿಯದಂತೆ ಮಾಡುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದ ಎಂಟು ವಿಭಾಗಗಳ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಕೊಡುವ ಚಿಕ್ಕ ಪ್ರಯತ್ನ ನನ್ನದು.


 ೧.ನಿಷೇಧಾಕ್ಷರಿ
ಈ ವಿಭಾಗದ ಪೃಚ್ಛಕರು, ಅವಧಾನಿಗಳಿಗೆ ಪದ್ಯದ ವಿಷಯ ಮತ್ತು ಛಂಧಸ್ಸನ್ನು ತಿಳಿಸಿ ಪದ್ಯ ರಚಿಸಲು ಸೂಚಿಸುತ್ತಾರೆ.ಅವಧಾನಿಗಳು ಪದ್ಯ ರಚನಾಮಗ್ನರಾಗಿ,ಪದ್ಯದ ಮೊದಲ ಪದದ ಮೊದಲ ಅಕ್ಷರವನ್ನು ಹೇಳಿದೊಡನೆಯೇ ಪೃಚ್ಛಕರು ಮುಂದಿನ ಅಕ್ಷರವನ್ನು ಊಹಿಸಿ ,ಆ ಅಕ್ಷರವನ್ನು ಬಳಸಕೂಡದೆಂದು ನಿಷೇಧ ಒಡ್ಡುತ್ತಾರೆ. ಈ ರೀತಿಯ ಅಕ್ಷರ ನಿಷೇಧ ಕಾವ್ಯ ಪೂರ್ಣಗೊಳ್ಳುವವರೆಗೂ ಮುಂದುವರೆಯುತ್ತದೆ.
  ಈ ಭಾಗದಲ್ಲಿ ಪೃಚ್ಛಕರಾದವರು ಶ್ರೀ ಡಾ|| ಪಿ. ಶಾಂತಾರಾಮಪ್ರಭು, ನಿಟ್ಟೂರು. ಇವರು ಅಂದಿನ ಅಷ್ಟಾವಧಾನಕ್ಕೆ ತೆಗೆದುಕೊಂಡ ಪ್ರಶ್ನೆ ವೃಶ್ಚಿಕ ಕುಟುಕುವುದಕ್ಕೂ, ಅವಧಾನದಲ್ಲಿ ಪೃಚ್ಛಕರು ಕೇಳುವ ಪ್ರಶ್ನೆಗಳಿಗೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತಂತೆ ಕಂದಪದ್ಯ ರಚಿಸಬೇಕು ಎಂಬುದು ಇವರ ನಿಬಂಧನೆಗಳಾಗಿದ್ದವು. ಅವಧಾನಿಗಳು ಕಾವ್ಯ ರಚನೆಗೆ ತೊಡಗಿ ಒಂದೊಂದು ಅಕ್ಷರ ಹೇಳಿದಂತೆ , ಮುಂದಿನ ಅಕ್ಷರ ಯಾವುದನ್ನು ಬಳಸಬಹುದೆಂಬ ಸುಳಿವನ್ನು ಪತ್ತೆ ಹಚ್ಚಿದ ಶಾಂತಾರಾಮಪ್ರಭುಗಳು,ಮುಂದಿನ ಅಕ್ಷರ ಯಾವುದಿರಬಾರದೆಂದು ನಿಷೇಧ ಹೇರುತ್ತಾ, ಸಾಹಿತ್ಯಾಸಕ್ತರಿಗೆ ಕುತೂಹಲ ಮೂಡುವಂತೆ ಮಾಡಿದರು. ಈ ವಿಭಾಗದಲ್ಲಿ ಅವಧಾನಿಗಳು ಮತ್ತು ಪೃಚ್ಛಕರಿಬ್ಬರೂ ಒಳ್ಳೆಯ ಪಟ್ಟುಗಳನ್ನು ಹಾಕಿ , ನಿಷೇಧಾಕ್ಷರಿ ಸ್ವಾರಸ್ಯಪೂರ್ಣವಾಗಿರುವಂತೆ ಮಾಡುವುದರಲ್ಲಿ  ಯಶಸ್ವಿಯಾದರು. ಎಷ್ಟೇ ಅಕ್ಷರಗಳ ನಿಷೇಧ ಹೇರಿದರೂ ಗಣೇಶ್ ಅವರು ತಮ್ಮ ಅಗಾಧವಾದ ಸಾಹಿತ್ಯಾನುಭವದಿಂದ ಲೀಲಾಜಾಲವಾಗಿ ಕಾವ್ಯವನ್ನು ರಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.ಅವಧಾನಿಗಳಿಂದ ರಚಿತವಾದ ಕಾವ್ಯ ಹೀಗಿತ್ತು.

ನವಲವಧಾನಕೆ ಕೇಳ್ಮೆವಿ
 ಭವಮೆನೆ  ನೀಂ ಬನ್ದಪಾಳಿ ಚೇಳಂತಕ್ಕುಂ
 ತಿವಿಯಲ್ ಮಾತಿಂ ಮುನ್ನಂ
 ಕವಿಯಲ್ ಕೊಂಡಿಯಿಂ ನಹೋರಸಂ ಮೇಣ್ ಸಲ್ಗುಂ

೨.ದತ್ತಪದಿ
 ಈ ವಿಭಾಗದಲ್ಲಿ ಪೃಚ್ಛಕರು ವಿಷಯ ಮತ್ತು ಛಂದಸ್ಸಿನೊಡನೆ ಕೆಲವು ಪದಗಳನ್ನು ನೀಡಿ ಅವು ಪದ್ಯದ ಯಾವುದೋ ಭಾಗದಲ್ಲಿ ಬರಬೇಕೆಂದು ಸೂಚಿಸುತ್ತಾರೆ.
 ಇಲ್ಲಿ ಪೃಚ್ಛಕರಾಗಿ ಭಾಗಿಗಳಾಗಿದ್ದವರು ಶ್ರೀ ಸಿ.ಎಸ್. ಚಂದ್ರಶೇಖರ್.ಇವರು ಅವಧಾನಿಗಳಿಗೆ ಲಲಿತರಗಳೆ, ದ್ವಿಪದಿಯಲ್ಲಿ ಪದ್ಯ ರಚಿಸುವಂತೆ ಆಹ್ವಾನವಿತ್ತರು.ಪ್ರಜಾಪರಿಪಾಲಕನಾದ ರಾಜ ದೈವಾನುಗ್ರಹಕ್ಕಾಗಿ ಬೇಡುವುದು ದತ್ತಪದಿಯ ವಸ್ತು. ಆದರೆ ಕಾವ್ಯದ ಮೊದಲ ಸಾಲಿನಲ್ಲಿ ’ಕಾರಂತ’ , ಎರಡನೆ ಸಾಲಿನಲ್ಲಿ ’ನಾಡಿಸೋಜ’, ಮೂರನೆ ಸಾಲಿನಲ್ಲಿ ’ಕುವೆಂಪು’  ಮತ್ತು ಕೊನೆಯ ಸಾಲಿನಲ್ಲಿ ’ಡಿವಿಜಿ’  ಬರಬೇಕೆಂಬುದು ಇವರ ನಿಬಂಧನೆ. ಈ ಕವಿಗಳ ಹೆಸರು ಬರುವಂತೆ ಅರ್ಥಭರಿತ ಕಾವ್ಯ ರಚಿಸಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿತ್ತು.

ಸಿರಿ ಅಲಂಕಾರಂ ತ ಮಾಲನೀಲನೆ ನಿನಗೆ
 ಪರಮಾತ್ಮನೊಡನಾಡಿಸೋ ಜಗಜ್ಜನಕನಿಗೆ    
 ಸರಿಯು ಚಯಮನಂ ನೂಂಕುವೆಂ ಪುಣ್ಯದಿಂ ವೈರಿ
 ವಿರಚಿಸೈ ನೋಡಿ ವಿಜಿತಾದಿಯಪ್ಪಂತೆ ನಾಂ

  ಎಲ್ಲಾ  ನಿಬಂಧನೆಗಳನ್ನೂ ಒಳಗೊಂಡ ಸುಂದರವಾದ ಕಾವ್ಯ ಅವಧಾನಿಗಳಿಂದ ರಚಿತವಾದ ನಂತರ ಜನ ತಮ್ಮ ಅಭಿನಂದನೆಯನ್ನು ತಮ್ಮ ಕರತಾಡನದ ಮೂಲಕ ಸಲ್ಲಿಸಿದರು.

 ೩.ಸಮಸ್ಯೆ
 ಈ ವಿಭಾಗದಲ್ಲಿ ಛಂದೋಬದ್ಧವಾದ ಅಸಂಗತ ವಾಕ್ಯವೊಂದನ್ನು ಪೃಚ್ಛಕರು ನೀಡುವರು.ಅವಧಾನಿಗಳು ವಾಕ್ಯ ಸುಸಂಗತವಾಗುವಂತೆ ಅದೇ ಛಂದಸ್ಸಿನಲ್ಲಿ ಪದ್ಯ ರಚಿಸುತ್ತಾರೆ.
  ಇಲ್ಲಿ ಪೃಚ್ಛಕರಾಗಿದ್ದ ಶ್ರೀ ಡಾ|| ಸನತ್ಕುಮಾರ , ಮತ್ತೂರು ಇವರು ನೀಡಿದ ಅಸಂಗತ ವಾಕ್ಯ ಹೀಗಿತ್ತು.
   ಪತ್ನೀದಾಸಂ ವರಯತಿವರಂ ಶಂಕರಾರ್ಕ್ಕಂ ಕುಡಲ್ಕೆ
 ಎಲ್ಲಿಯ ಪತ್ನೀದಾಸ,ಎಲ್ಲಿಯ ವರಯತಿ, ಎಲ್ಲಿಯ ಶಂಕರ. ಆದರೂ ಅರ್ಥಪೂರ್ಣವಾದ ಪದ್ಯ ರಚಿಸುವಲ್ಲಿ ಅವಧಾನಿಗಳು ಯಶಸ್ವಿಯಾದರು.

ಯತ್ನೋಪಾಸ್ಯರ್  ಶ್ರುತಿ ಯುವತಿಯರ್ ಸರ್ವಥಾ ಸಾಧುಸತ್ವರ್
ಪ್ರತ್ನೋದಂತಂ ಪ್ರತಿತ ವಿಭವಂ ಕೇವಲಾಧ್ವೈತ ತತ್ವಂ
ಜಿತ್ನಂ ನಿಲ್ಗುಂ ಜಗದ ಹಿತಕಂ ನೋಂತಿರಲಕಿಂತು ತಾನಾ ಕಾಂತಾದಾಸಂ

೪. ನ್ಯಸ್ತಾಕ್ಷರಿ
  ಪದ್ಯದ ನಿರ್ಧಿಷ್ಟ  ಸಾಲು ಹಾಗೂ ಸ್ಥಾನಗಳಲ್ಲಿ ಪೃಚ್ಛಕರು ಸೂಚಿಸುವ ಅಕ್ಷರಗಳೇ ಬರುವಂತೆ , ಕೇಳಿದ ಛಂದಸ್ಸಿನಲ್ಲಿ ,ಅಪೇಕ್ಷಿಸುವ ವಿಷಯದ ಬಗ್ಗೆ ಅವಧಾನಿಗಳು ಪದ್ಯ ರಚಿಸಬೇನ್ನುವ ನಿಬಂಧನೆಗೆ  ನ್ಯಸ್ತಾಕ್ಷರಿ ಎನ್ನುವರು.
 ಈ ವಿಭಾಗದಲ್ಲಿ ಅನುಭವಿ ಅವಧಾನಿಗಳಿಗೆ ಪ್ರಶ್ನೆ ಹಾಕಿದ ಪೃಚ್ಛಕರು ಒಬ್ಬ ಸಾಫ್ಟ್ವೇರ್  ಇಂಜಿನಿಯರ್, ಯುವಕ ಶ್ರೀ ಹೆಚ್.ಆರ್.ಶ್ರೀಶ ಎಂಬುದು ವಿಶೇಷವಾಗಿತ್ತು. ಈ ಹುಡುಗನ ಕನ್ನಡ ಸಾಹಿತ್ಯಾಸಕ್ತಿಗೆ ಭಲೇ ಎನ್ನಲೇಬೇಕು. ಇಂದಿನ ರಾಜಕೀಯದಿಂದಾಗಿ ಉಂಟಾಗಿರುವ ಜನರ ದುಸ್ಥಿತಿ ಯನ್ನು ಭಾಮಿನಿ ಷಟ್ಪದಿಯಲ್ಲಿ, ಕನ್ನಡೀಂಗ್ಲೀಷ್ ಪದಗಳನ್ನೊಳಗೊಂಡ ಪದ್ಯದಲ್ಲಿ ಹೇಳಬೇಕೆಂಬುದು ಪೃಚ್ಛಕರ ಪ್ರಶ್ನೆಯಾಗಿತ್ತು. ಇದಲ್ಲದೆ, ಒಂದನೇ ಸಾಲಿನ ಎರಡನೆ ಅಕ್ಷರ ’ನ್ದ’ , ಮೂರನೇ ಸಾಲಿನ  ಆರನೆ ಅಕ್ಷರ ’ಗ್ರಾ’ ,ನಾಲ್ಕನೇ ಸಾಲಿನ ನಾಲ್ಕನೆ ಅಕ್ಷರ ’ಡ್ರ’ ಮತ್ತು ಐದನೇ ಸಾಲಿನ ಐದನೆ ಅಕ್ಷರ  ’ಪ್ಪು’ ಆಗಿರಬೇಕೆಂಬ ನಿಬಂಧನೆಯನ್ನೂ ಇಟ್ಟಿದ್ದರು. ಇದಕ್ಕೆ ಶತಾವಧಾನಿ ಗಣೇಶ್ ರವರು ರಚಿಸಿದ ಪದ್ಯ ಹೀಗಿತ್ತು.

ನ್ದನಂದನ ಕುಲದವೋಲೀ
 ಕಂದು ಕಪೃತಿಯಂದದಿ ಚಕ್ಕಂದವಾ
 ಟವನಡೆಸಿ ಗ್ರಾಮಲೀಲೆಯ ಸಾಗಿಸುವ ವಿಭುಗಳ್
 ಬಂದು ಸ್ಕ್ರೂಡ್ರೈವರ್ಗಳಂದದಿ
 ಕೊಂದಿರಲ್ಕಪ್ಪುಗಳು  ಡೌನುಗಳು
 ಬಂದುವೀಗಣತಂತ್ರಕೆನ್ನುವೆ ಮರ್ಸಿಲೆಸ್ಸ್

೫. ಆಶುಕವಿತ್ವ
  ಪೃಚ್ಛಕರು ಬಯಸುವ ವಿಷಯದ ಬಗ್ಗೆ , ಬಯಸುವ ಛಂದಸ್ಸಿನಲ್ಲಿ ಆ ಕ್ಷಣದಲ್ಲಿಯೇ ಪೂರ್ಣ ಪದ್ಯವನ್ನು ರಚಿಸುವುದು ಆಶುಕವಿತ್ವ.
 ಈ ವಿಭಾಗದಲ್ಲಿ ನಮಗೆಲ್ಲರಿಗೂ ಚಿರಪರಿಚಿತರಾದ ಕಗ್ಗ ನಟೇಶ್ ಅವರು ಪೃಚ್ಛಕರಾಗಿದ್ದರು.ಇವರು ಆಶುಕವಿತೆಗಳನ್ನು ಕಟ್ಟಲು ಅವಧಾನಿಗಳಿಗೆ ವಿಷಯವನ್ನು ನೀಡಿದರು.
 ಮೊದಲನೆಯದಾಗಿ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡಾಭಿಮಾನ ಮೆರೆದರೆ ಸಾಕೆ ಎಂಬ ವಿಷಯವನ್ನಿಟ್ಟುಕೊಂಡು ಕಂದಪದ್ಯದಲ್ಲಿ ಕವಿತೆ ರಚಿಸಲು ಕೇಳಿಕೊಂಡರು.
  ಎರಡನೆಯದು ಮತ್ತೇಭ ವಿಕ್ರೀಡಿತ ವೃತ್ತದಲ್ಲಿ ರಾಮರಾಜ್ಯದ ಪ್ರಸ್ತಾಪವಿರುವ ಪದ್ಯ ರಚನೆ.
 ಮೂರನೆಯದು ಅನಧೀಕೃತ ದೇವಸ್ಥಾನಗಳಿಗಿರುವ ಆತಂಕ ಬಾರ್ ಗಳಿಗಿಲ್ಲದಿರುವ ವಿಷಯದ ಮೇಲೆ ಕುಸುಮ ಷಟ್ಪದಿಯಲ್ಲಿ ಆಶುಕವಿತೆ ರಚಿಸಲು ಕೇಳಿಕೊಂಡರು. ಈ ಭಾಗದಲ್ಲಿ ಸೊಗಸಾದ ಕವಿತೆಗಳು ಮೂಡಿಬಂದವು. ಅವಧಾನಿಗಳು ಈ ಮೂರು ಕವಿತೆಗಳನ್ನು ಪಟಾಪಟ್ ಎಂದು ಹೇಳಿ ಮುಗಿಸಿದ್ದರಿಂದ ನನಗೆ ಆ ಪದ್ಯಗಳನ್ನು ಸರಿಯಾಗಿ ಬರೆದುಕೊಳ್ಳಲು ಸಾಧ್ಯವಾಗಲಿಲ್ಲ.
  ಒಂದೇ ಒಂದು ಕವಿತೆಯನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಅದು ಪರಿವರ್ಧಿನಿ ಷಟ್ಪದಿಯಲ್ಲಿ ರಚಿಸಿದ ಸ್ತ್ರೀ ಪ್ರಧಾನವೋ ಪುರುಷ ಪ್ರಧಾನವೋ ಎಂಬ ವಿಷಯಕ್ಕೆ ಸಂಬಂಧಪಟ್ಟದ್ದು. 

ಮುಡಿಯೊಳ್ ಮಾನಿನಿ ಮೆರೆವಳ್ ಶಿವನಾ
 ಜಡಜತೆವರಿಗೊ ಮುಖದೊಳ್ ಮಡದಿಯೊ
 ಪಡಿಮೂಡಿಹಳಾ ಸಿರಿ ನಾರಾಯಣನೆದೆಯೊಳಗೆ
 ಸಡಗರ ಪಡುವೆಂ ಸಕಲವೌವ್ಯಕ್ತಿಯೆ
 ತೊಡಗುವುದು ನಾರಿಯ ರೂಪಿಂದ
 ನುಡಿಯೆ ಸಾಕ್ಷಿಗಢಂ ನನ್ನೀ ಪರಿ ತಿಳಿಯೆ ನೀನು ನಟೇಶಾ...

೬. ಕಾವ್ಯವಾಚನ
 ಈ ಭಾಗದ ಪೃಚ್ಛಕರು ಪ್ರಸಿದ್ಧವಾದ ಪ್ರಾಚೀನ ಕಾವ್ಯವೊಂದರ ರಸವತ್ತಾದ ಘಟ್ಟಗಳನ್ನು ಓದಿ ಮುಗಿಸುತ್ತಿದ್ದಂತೆಯೇ ಅವಧಾನಿಗಳು , ಆ ಕಾವ್ಯವನ್ನು ಯಾವ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ ಮತ್ತು ಕವಿಯ ಹೆಸರು ತಿಳಿಸಿ ಪದ್ಯ ಭಾಗದ ತಾತ್ಪರ್ಯವನ್ನು ಸಂದರ್ಭ ಸಹಿತವಾಗಿ ವಿವರಿಸುತ್ತಾರೆ.
 ಕಾವ್ಯವಾಚನದ ವಿಭಾಗದಲ್ಲಿ ಪೃಚ್ಛಕರಾಗಿದ್ದವರು ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ. ಇವರ ಗಾಯನವನ್ನು ಮರೆಯುವಂತೆಯೇ ಇಲ್ಲ. ತುಂಬು ಮಾಧುರ್ಯದ ಕಂಠದಿಂದ , ಭಾವನೆಗಳನ್ನು ಪದಗಳಲ್ಲಿ ತುಂಬಿ ಕಾವ್ಯವಾಚಿಸುತ್ತಿದ್ದರೆ , ನಮ್ಮಂತಹ ಸಾಮಾನ್ಯರಿಗೂ ಕೂಡ  ವ್ಯಾಖ್ಯಾನದ ಅಗತ್ಯವೇ ಇಲ್ಲದೆ ಕಾವ್ಯ ಅರ್ಥವಾಗುತ್ತಿತ್ತು. ಶ್ರೀಯುತರು ಈ ದಿನದ ಅಷ್ಟಾವಧಾನಕ್ಕಾಗಿ ಕುವೆಂಪು ವಿರಚಿತ ’ಶ್ರೀ ರಾಮಾಯಣ ದರ್ಶನಂ’ , ನಾಗವರ್ಮನ ’ ಕರ್ನಾಟಕ ಕಾದಂಬರಿ’ ಮತ್ತು ಕುಮಾರವ್ಯಾಸ ಭಾರತದ  ಕಾವ್ಯಗಳನ್ನೇ ಅಲ್ಲದೇ ಡಿವಿಜಿ ಅವರ ’ಅಂತಃ ಪುರ ಗೀತೆ’ ಯಿಂದಲೂ ಪದ್ಯ ಭಾಗವನ್ನು ತೆಗೆದುಕೊಂಡು ಸುಶ್ರಾವ್ಯವಾಗಿ ವಾಚಿಸಿದ್ದು ವಿಶೇಷವಾಗಿತ್ತು.

 ೭.ಸಂಖ್ಯಾಬಂಧ
 ಪೃಚ್ಛಕರು ಅವಧಾನ ಪ್ರಾರಂಭಕ್ಕೆ ಒಂದು ಸಂಖ್ಯೆಯನ್ನು ತಿಳಿಸುತ್ತಾರೆ.ಐದೈದು ಸಾಲುಗಳ ಇಪ್ಪತೈದು ಮನೆಗಳಲ್ಲಿ ,ಒಂದೊಂದುಮನೆಯಲ್ಲಿ ಇರಬೇಕಾದ ಸಂಖ್ಯೆಯನ್ನು ಅವಧಾನಿಗಳು ಪದ್ಯ ರಚನೆಯಲ್ಲಿ ತೊಡಗಿದ್ದಾಗ ಪೃಚ್ಛಕರು ಕೇಳುತ್ತಾರೆ. ಕೊನೆಯಲ್ಲಿ ಯಾವುದೇ ಸಾಲಿನಿಂದ ಕೂಡಿದರೂ ಮೊತ್ತ ಮೊದಲು ತಿಳಿಸಿದ ಸಂಖ್ಯೆಯಾಗಿರುತ್ತದೆ.
 ಈ ವಿಭಾಗದಲ್ಲಿ ಶ್ರೀ ಎನ್.ಬಿ.ರವೀಶ್, ಶಿವಮೊಗ್ಗ ಇವರು ಅವಧಾನಿಗಳಿಗೆ ಹೇಗೆ ಕೂಡಿದರೂ ೮೧೭ ಬರುವಂತೆ ಸಂಖ್ಯಾಬಂಧವನ್ನು ಪೂರ್ಣಗೊಳಿಸುವಂತೆ ಪ್ರಶ್ನೆಯನ್ನಿಟ್ಟರು.ಅವಧಾನಿಗಳು ಕಾವ್ಯ ರಚನೆಯಲ್ಲಿ ಮಗ್ನರಾಗಿದ್ದಾಗ ,ಅವರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡು ಒಂದೊಂದೇ ಮನೆಯ ಸಂಖ್ಯೆ ತಿಳಿಸಲು ಕಾಡುತ್ತಿದ್ದರು.ಆದರೆ ಅವಧಾನಿಗಳು ಮಾತ್ರ ಸ್ವಲ್ಪವೂ ವಿಚಲಿತರಾಗದೆ ನಗುನಗುತ್ತಲೇ ಸಂಖ್ಯೆಗಳನ್ನು ನೀಡಿ ತಮ್ಮ ಕಾವ್ಯ ರಚನೆಯನ್ನು ಮುಂದುವರೆಸುತ್ತಿದ್ದುದು ಅಚ್ಚರಿಯನ್ನುಂಟುಮಾಡುತ್ತಿತ್ತು.

೮.ಅಪ್ರಸ್ತುತ ಪ್ರಸಂಗ
 ಅಷ್ಟಾವಧಾನವು ಗಂಭೀರವಾಗಿ ನಡೆಯುತ್ತಿರುವಾಗ ಮಧ್ಯೆ ಮಧ್ಯೆ ಏನೇನೋ ಪ್ರಶ್ನೆಗಳನ್ನು ಕೇಳಿ , ಅವಧಾನಿಗಳ ಚಿತ್ತವನ್ನು ಅತ್ತಿತ್ತ ಹೋಗುವಂತೆ ಮಾಡುವುದು ಮತ್ತು ಅವರ ಏಕಾಗ್ರತೆಗೆ ಭಂಗ ತರುವುದು ಈ ಭಾಗದ ಪೃಚ್ಛಕರ ಕೆಲಸ. ಈ ವಿಭಾಗದಲ್ಲಿ ನಮಗೆಲ್ಲರಿಗೂ ಪರಿಚಿತರಾದ ಡಾ|| ಗಜಾನನ ಶರ್ಮ, ಬೆಂಗಳೂರು ಇವರು ಪೃಚ್ಛಕರಾಗಿದ್ದರು.ಇಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಕೇಳಬೇಕೆಂಬ ಕಟ್ಟುಪಾಡುಗಳಿಲ್ಲ. ರಂಜನೆಗಾಗಿ ಯಾವ ನಿಯಮವೂ ಇಲ್ಲದೆ, ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ಯಾವಾಗ ಬೇಕಾದರೂ ಕೇಳಬಹುದು.ಅವಧಾನಿಗಳು ಗಂಭೀರವಾಗಿ ಇತರ ಪಚ್ಛಕರು ಕೊಟ್ಟ ಪದ್ಯದ ಸಾಲುಗಳನ್ನು ಬಿಡಿಸುತ್ತಿದ್ದಾಗ ಇವರ ಪ್ರಶ್ನೆಗಳು ನಮಗೆ ಅಪ್ರಸ್ತುತ ಎನ್ನಿಸುತ್ತವೆ. ಆದರೆ ಅವಧಾನಿಗಳು ಮಾತ್ರ ನಗುನಗುತ್ತಲೇ ಇವರ ಪ್ರಶ್ನೆಗಳಿಗೆಲ್ಲಾ ಮೊನಚಾದ,ಹಾಸ್ಯದ ಉತ್ತರಗಳನ್ನು ನೀಡುತ್ತಾ , ಪ್ರೇಕ್ಷಕರನ್ನು ನಗಿಸಿ,ವಾತಾವರಣದ ಗಂಭೀರತೆಯನ್ನು ಸ್ವಲ್ಪ ಕಾಲ ಮರೆಸಿ, ನಮ್ಮ ಮನ ಮತ್ತೆ ಅಷ್ಟಾವಧಾನದಲ್ಲಿ  ಮುಳುಗುವಂತೆ ಮಾಡುತ್ತಿದ್ದರು. ಪ್ರಾರಂಭದಿಂದ ಮುಗಿಯುವವರೆಗೆ ಸುಮಾರು ಮುವತ್ತು ಮುವತೈದು ಪ್ರಶ್ನೆಗಳನ್ನು ಕೇಳಿರಬಹುದು. ಅವುಗಳಲ್ಲಿ ಶರ್ಮ ರವರ ಬತ್ತಳಿಕೆಯಿಂದ ಬಂದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವಧಾನಿಗಳಿಂದ ಬಂದ ಮೊನಚು ಉತ್ತರಗಳನ್ನಿಲ್ಲಿ ನೋಡೋಣ.   
 ೧. ರಾವಣನಂತೆ ನಿಮಗೆ ಹತ್ತು ತಲೆ ಇದ್ದಿದ್ದರೆ?
     ಅವಧಾನಿಯಾಗುತ್ತಿರಲಿಲ್ಲ, ಅವಮಾನಿಯಾಗುತ್ತಿದ್ದೆ  ಎಂಬ ಮೊನಚಾದ ಉತ್ತರ ಬಂತು
 ೨. ಭಾರತದಲ್ಲಿ ಹೆರಿಗೆ-ತೆರಿಗೆ ಎರಡೂ ಹೆಚ್ಚು ಅಂತಾರೆ ಸರಿಯೇ?
      ಹೌದು,ಕೆಲವರಿಗೆ ಹೆರಿಗೆ ಹೆಚ್ಚು, ಇನ್ನು ಕೆಲವರಿಗೆ ತೆರಿಗೆ ಹೆಚ್ಚು. ಅಷ್ಟೇ.
 ೩. ಮನುಷ್ಯ ಎಷ್ಟಾದರೂ ಅಂಗಿಗಳನ್ನು ಇಟ್ಕೋಬಹುದಾ?
      ಇಟ್ಕೋಬಹುದು ಆದ್ರೆ ಅರ್ಧಾಂಗಿಯರನ್ನಲ್ಲ.
 ೪. ನಿಮ್ಮನ್ಯಾಕೆ ನಿತ್ಯಾನಂದ ಅಂತಾ ಕರೀಬಾರದು?
       ಸಾಧ್ಯವಿಲ್ಲ. ನಿತ್ಯಾನಂದನಿಗೆ ಆಶ್ರಮವಿದೆ, ಆದರೆ ನನಗೆ ಬರೀ ಶ್ರಮವಿದೆ.
 ೫. ಅಗ್ನಿದೇವ ಹೇಗೆ ಸ್ನಾನ ಮಾಡುತ್ತಾನೆ?
      ಅವನು Oil Bath  ತಗೋಳ್ತಾನೆ.
 ೬. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಗಾದೆ ಈಗ out dated ಅನ್ಸುತ್ತೆ. ಯಾಕೆಂದ್ರೆ ಗ್ಯಾಸ್ ಒಲೆಗೆ    
    ತೂತು ಇರಲೇಬೇಕಲ್ಲ?
       ಇರಬಹುದು. ಆದರೆ ಗ್ಯಾಸ್ ಟ್ಯೂಬಲ್ಲಿ ಸಣ್ಣ ತೂತಾದರೂ ಒಲೆ ಮಾತ್ರವಲ್ಲ ಮನೆಯನ್ನೇ ಕೆಡಿಸುತ್ತದೆ.
 ೭. ಗಗನವು ಎಲ್ಲೋ ಭೂಮಿಯು ಎಲ್ಲೋ- ಗೀತೆ ರಚಿಸಿದವರಿಗೆ ಜಾಂಡೀಸ್ ಇತ್ತಾ?
     ಇರಬಹುದು, ಅವರಿಗೆ ಕಾವ್ಯದ ಕಾಮಾಲೆ ಆವರಿಸಿತ್ತು.ಇಲ್ಲದಿದ್ದರೆ ಅಷ್ಟೊಂದು ಅರ್ಥವತ್ತಾದ ಗೀತೆ ರಚಿಸಲು 
     ಸಾಧ್ಯವಿತ್ತೇ? ಚಲನಚಿತ್ರ ಗೀತೆಗಳಲ್ಲೂ ಉತ್ತಮವಾದವುಗಳಿದ್ದಾವೆ ಎಂದು ಕೆಲವು  ಚಿತ್ರಗೀತೆಗಳನ್ನು
     ಉಲ್ಲೇಖಿಸಿದರು.
 ೮. ಎಳೆದಷ್ಟೂ ಗಿಡ್ಡ ಆಗುವುದು ಯಾವುದು?
     ಅವಧಾನಿಗಳು ಹೆಂಗಸರ ಸೆರಗಿರಬಹುದು ಅಂದ್ರು .ಆದರೆ ಶರ್ಮ ಗಂಡಸರ ಬೀಡಿ ಎಂದರು.ಏನೋ ಎರಡರ
     ಅನುಭವವೂ ನನಗಿಲ್ಲ ಎಂದ ಅವಧಾನಿಗಳ ಮಾತಿನಿಂದ ಸಭೆ ನಗೆಗಡಲಿನಲ್ಲಿ ಮುಳುಗಿತು.

  ಹೀಗೆ ಗಣೇಶ್ ರವರು ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ,ಎಲ್ಲಾ ಎಂಟು ಪೃಚ್ಛಕರ ಪ್ರಶ್ನೆಗಳಿಗೆ ಸಮಂಜಸ   ಉತ್ತರಗಳನ್ನು ತಮ್ಮ ಪಾಂಡಿತ್ಯದಿಂದ ನೀಡಿ ಅಂದಿನ ಆಷ್ಟಾವಧಾನ ಕಾರ್ಯಕ್ರಮಕ್ಕೆ ಯಶಸ್ವೀ ತೆರೆ ಎಳೆದರು.    

 (ವಿ.ಸೂ : ಕಾರ್ಯಕ್ರಮ ನಡೆಯುತ್ತಿರುವಾಗ ಶ್ರೀ ಗಣೇಶ್ ರವರು ಕಾವ್ಯಗಳನ್ನು ಕೇವಲ ಬಾಯಲ್ಲಿ ಹೇಳಿದ್ದನ್ನು, ನಾನು ನನಗೆ ಕೇಳಿಸಿದಮಟ್ಟಿಗೆ  ಮತ್ತು ನನಗೆ ತಿಳಿದಮಟ್ಟಿಗೆ  ಬರೆದುಕೊಂಡಿದ್ದೇನೆ. ಕಾವ್ಯದ ಛಂದಸ್ಸಿನಲ್ಲಿ ತಪ್ಪುಗಳಿದ್ದರೆ ಅದು ನನ್ನ ಗಮನಿಸುವಿಕೆಯಲ್ಲಾದ ತಪ್ಪೆಂದು ತಿಳಿಯಬೇಕೆಂದು ಕೋರಿಕೆ. ಕಾರ್ಯಕ್ರಮದ ಒಟ್ಟಂದವನ್ನು ಇಲ್ಲಿ ಹಂಚಿಕೊಳ್ಳಬೇಕೆಂಬ  ತವಕ  ನನ್ನ ಈ ಬರವಣಿಗೆಗೆ ಸ್ಪೂರ್ತಿ. )


ಪದ ವಿನ್ಯಾಸ -1




          



1


2


3
x
x
4

x
x

x
x
5




x
x
6

7
x
x
x

8

9

x
10
11
x
x
x

x

x
x
x
12
13

14
15


16
x
x
x

x

x
x
x
17
18
x
19



20
x
x
x
21


x
x

22


23
x
x

x
x


x
x
24




































ಎಡದಿಂದ ಬಲಕ್ಕೆ:-

















1  ಕನ್ನಡಿಗರ ನಾಡಹಬ್ಬ (7)





5  ನವೀನತೆಯ ಹುಟ್ಟು (4)





6  ಹಾಡು ಹೇಳಿದ್ದಕ್ಕೆ ಕೊಟ್ಟ ಬಿಲ್ಲೆ (3)




8  ಶಪಿಸಲ್ಪಟ್ಟ ಹೆಂಡತಿ (4)






10  ಸಂಗಡ (2)







12  ಮಧ್ಯದಲ್ಲೇಕೊ ಗರಂ ಆಗಿರುವ ಪ್ರೀತಿಯ ಬಣ್ಣ (4)


15  ಕಾವ್ಯ-ನಾಟಕಗಳಲ್ಲಿ ಬರುವ ಒಂಬತ್ತು ಸಾರ (4)


17  ಮಂಜುಗೆಡ್ಡೆ (2)






19  ಅಂತ್ಯದಲ್ಲಿ ಧೀರ್ಘವಾದ ಕಣಗಲೆ (4)




21  ರಸ ವೇಗವಾಗಿ ಹರಿದಿದೆ (3)





22  ಹಾದಿಯಲ್ಲಿ ತಿರುಗುವವನು ಹಿಂತಿರುಗಿದ್ದಾನೆ (4)


24  ಮಾಸ್ತಿಯವರ ಈ ಕೃತಿಗೆ ಙ್ಞಾನಪೀಠ ಪ್ರಶಸ್ತಿ ಸಂದಿದೆ (2)











ಮೇಲಿನಿಂದ ಕೆಳಕ್ಕೆ :-
















1  ಶಿಲೆಯಲ್ಲಿ ಕೊರೆದಿಟ್ಟ ಬರಹ (6)





2 ನಮ್ಮ ದೇಶದ ಪ್ರಥಮ ಪ್ರಜೆ (4)




3  ಅಡವಿ (2)







4  ಹಾಲಿನಿಂದ ತಯಾರಿಸಿದ ಸಿಹಿಯಾದ ಭಕ್ಷ್ಯ (3)



7 ಕಡ್ಡಿಯೊಂದಿಗಿನ ಕೊಳೆ (2)





9 ಮಾಲೆ ಹಾಕಿ ಅಗೌರವಿಸುವುದಿರಬಹುದೆ? (3)



11 ಶಿವನನ್ನು ಧೀರ್ಘವಾಗಿ ಕರೆಯಿರಿ (2)




13 ಏನೂ ತಿಳಿಯದ ಹಳ್ಳಿಯವನು (3)




14 ಪೂಜ್ಯ ಮಂತ್ರಾಲಯ ನಿವಾಸಿ (6)




16 ಇಲ್ಲಿ ನಿಮ್ಮ ರುಜು ಹಾಕಿ (2)





18 ಸಸಿಯಲ್ಲ ವೃಕ್ಷ (2)






19 ಕನಕ (4)







20 ಮೋಸ ಮಾಡಿ ನಲಿಯುತ್ತಿರುವ ಗಿಲೀಟು (3)



23  ಹಾಸ್ಯಬ್ರಹ್ಮನೆಂದು ಖ್ಯಾತರಾದ ಕನ್ನಡದ ಲೇಖಕರು (2)