ಋತುಗಾನ


ಕಾಶ್ಮೀರದ ಟುಲಿಪ್ ಗಾರ್ಡನ್ನಿನ ವೀಡಿಯೊ ಚಿತ್ರಗಳೊಂದಿಗೆ ನನ್ನ ಲೇಖನದ ಪ್ರಸ್ತುತಿ.
ವೀಡಿಯೊ, ಲೇಖನ ಮತ್ತು ನಿರೂಪಣೆ
ಶ್ರೀಮತಿ ಮಂಜುಳಾದೇವಿ, ವಿನ್ಯಾಸ, ಶಿವಮೊಗ್ಗ.

ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಬಣ್ಣದ ಬಳೆ... ರವಿಗೆ ಕಳೆ..!!


    ಬಾಹ್ಯಾಕಾಶ ವಿಸ್ಮಯಗಳ ಆಗರ.ವಾತಾವರಣದ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿ ಜರುಗುವ ಅನೇಕ ಕ್ರಿಯೆಗಳು ಅತ್ಯದ್ಭುತ.ಇಂತಹ ಅಚ್ಚರಿಗಳಲ್ಲಿ, ಅಂಬರದಲ್ಲಿ ಮೂಡುವ ಕಾಮನಬಿಲ್ಲು ಸಹ ಒಂದು ಮನೋಹರ ಚಿತ್ರ.ಇದೇ ಕಾಮನಬಿಲ್ಲು ಸೂರ್ಯನ ಸುತ್ತ ಬಣ್ಣದ ಬಳೆಯಾಕಾರದಲ್ಲಿ ಮೂಡಿದರೆ ಆ ದೃಶ್ಯವೆಷ್ಟು ನಯನ ಮನೋಹರವಲ್ಲವೇ........!!!??? 

ಇತ್ತೀಚೆಗೆ ಭದ್ರಾವತಿಯಲ್ಲಿ ನಮ್ಮವರ ಕ್ಯಾಮರದಲ್ಲಿ ಸೆರೆಸಿಕ್ಕ ಈ ಮನಮೋಹಕ ದೃಶ್ಯಾವಳಿಗಳಿವು.ವೃತ್ತಾಕಾರದ ಬಣ್ಣದ ಬಳೆಗಳ ನಡುವೆ ಪ್ರಜ್ವಲಿಸುತ್ತಿದ್ದ ಸೂರ್ಯನನ್ನು ನೋಡುವುದೇ ಒಂದು ಅಪರೂಪದ ದೃಶ್ಯ.


  ನಿಸರ್ಗದಲ್ಲಿ ಉಂಟಾಗುವ ಅದ್ಭುತ ದೃಶ್ಯಕಾವ್ಯಗಳಲ್ಲಿ ಇದೂ ಒಂದು. ಭೂಮಿಯಿಂದ ಐದರಿಂದ ಎಂಟು ಕಿಲೋಮೀಟರ್ ಎತ್ತರದ ವಾತಾವರಣದಲ್ಲಿ ನಿರ್ಮಾಣವಾಗುವ ಹಿಮದ ಹರಳುಗಳ ಮೂಲಕ ಹಾದುಹೋಗುವ ರವಿಕಿರಣಗಳಿಂದುಂಟಾಗುವ ಪ್ರತಿಫಲನ,ವಕ್ರೀಭವನ ಮತ್ತು ಚದುರುವಿಕೆಯ ಕ್ರಿಯೆಗಳು ಈ ಬಣ್ಣದ ಬಳೆಗಳ ರಚನೆಗೆ ಕಾರಣವಂತೆ.ಇಲ್ಲಿ ಸೂರ್ಯನ ಬೆಳಕಿನ ಕಿರಣಗಳ ಎದುರು ಹಿಮದ ಹರಳುಗಳು ಪ್ರಿಸಂನಂತೆ ಮತ್ತು ದರ್ಪಣವಾಗಿ ವರ್ತಿಸಿ ಮನಸೆಳೆಯುವ ಕಾಮನಬಿಲ್ಲಿನ ಬಳೆಯ ಸೃಷ್ಟಿಗೆ ಕಾರಣವಾಗಿದೆ. ಇದನ್ನೇ ನಮ್ಮ ಪೂರ್ವಜರು ಸೂರ್ಯ ಗೂಡು ಕಟ್ಟಿದ್ದಾನೆ, ಮಳೆ ಬರುವ ಸೂಚನೆ ಎಂದು ಹೇಳುತ್ತಿದ್ದರು.