1 | 2 | 3 | x | x | 4 | ||||
x | x | x | x | 5 | |||||
x | x | 6 | 7 | x | x | x | |||
8 | 9 | x | 10 | 11 | x | x | x | ||
x | x | x | x | 12 | 13 | 14 | |||
15 | 16 | x | x | x | x | ||||
x | x | x | 17 | 18 | x | 19 | |||
20 | x | x | x | 21 | x | x | |||
22 | 23 | x | x | x | x | ||||
x | x | 24 | |||||||
ಎಡದಿಂದ ಬಲಕ್ಕೆ:- | |||||||||
1 ಕನ್ನಡಿಗರ ನಾಡಹಬ್ಬ (7) | |||||||||
5 ನವೀನತೆಯ ಹುಟ್ಟು (4) | |||||||||
6 ಹಾಡು ಹೇಳಿದ್ದಕ್ಕೆ ಕೊಟ್ಟ ಬಿಲ್ಲೆ (3) | |||||||||
8 ಶಪಿಸಲ್ಪಟ್ಟ ಹೆಂಡತಿ (4) | |||||||||
10 ಸಂಗಡ (2) | |||||||||
12 ಮಧ್ಯದಲ್ಲೇಕೊ ಗರಂ ಆಗಿರುವ ಪ್ರೀತಿಯ ಬಣ್ಣ (4) | |||||||||
15 ಕಾವ್ಯ-ನಾಟಕಗಳಲ್ಲಿ ಬರುವ ಒಂಬತ್ತು ಸಾರ (4) | |||||||||
17 ಮಂಜುಗೆಡ್ಡೆ (2) | |||||||||
19 ಅಂತ್ಯದಲ್ಲಿ ಧೀರ್ಘವಾದ ಕಣಗಲೆ (4) | |||||||||
21 ರಸ ವೇಗವಾಗಿ ಹರಿದಿದೆ (3) | |||||||||
22 ಹಾದಿಯಲ್ಲಿ ತಿರುಗುವವನು ಹಿಂತಿರುಗಿದ್ದಾನೆ (4) | |||||||||
24 ಮಾಸ್ತಿಯವರ ಈ ಕೃತಿಗೆ ಙ್ಞಾನಪೀಠ ಪ್ರಶಸ್ತಿ ಸಂದಿದೆ (2) | |||||||||
ಮೇಲಿನಿಂದ ಕೆಳಕ್ಕೆ :- | |||||||||
1 ಶಿಲೆಯಲ್ಲಿ ಕೊರೆದಿಟ್ಟ ಬರಹ (6) | |||||||||
2 ನಮ್ಮ ದೇಶದ ಪ್ರಥಮ ಪ್ರಜೆ (4) | |||||||||
3 ಅಡವಿ (2) | |||||||||
4 ಹಾಲಿನಿಂದ ತಯಾರಿಸಿದ ಸಿಹಿಯಾದ ಭಕ್ಷ್ಯ (3) | |||||||||
7 ಕಡ್ಡಿಯೊಂದಿಗಿನ ಕೊಳೆ (2) | |||||||||
9 ಮಾಲೆ ಹಾಕಿ ಅಗೌರವಿಸುವುದಿರಬಹುದೆ? (3) | |||||||||
11 ಶಿವನನ್ನು ಧೀರ್ಘವಾಗಿ ಕರೆಯಿರಿ (2) | |||||||||
13 ಏನೂ ತಿಳಿಯದ ಹಳ್ಳಿಯವನು (3) | |||||||||
14 ಪೂಜ್ಯ ಮಂತ್ರಾಲಯ ನಿವಾಸಿ (6) | |||||||||
16 ಇಲ್ಲಿ ನಿಮ್ಮ ರುಜು ಹಾಕಿ (2) | |||||||||
18 ಸಸಿಯಲ್ಲ ವೃಕ್ಷ (2) | |||||||||
19 ಕನಕ (4) | |||||||||
20 ಮೋಸ ಮಾಡಿ ನಲಿಯುತ್ತಿರುವ ಗಿಲೀಟು (3) | |||||||||
23 ಹಾಸ್ಯಬ್ರಹ್ಮನೆಂದು ಖ್ಯಾತರಾದ ಕನ್ನಡದ ಲೇಖಕರು (2) | |||||||||
ಪದ ವಿನ್ಯಾಸ -1
ಚೈತನ್ಯದ ನುಡಿಗಳು - ಅಲ್ಲಿ ಇಲ್ಲಿ ಹೆಕ್ಕಿದ್ದು - ೩
೧. ಬದುಕಿಗೆ ಕ್ರಾಂತಿಯೆಂಬ ಮಳೆಗಾಲವೂ ಬೇಕು
ಶಾಂತಿಯೆಂಬ ಶರತ್ಕಾಲವೂ ಇರಬೇಕು.
೨. ಒಳಿತು ಬಲಿಷ್ಟವಾಗದೆ ಪ್ರಯೋಜನವಿಲ್ಲ.
೩. ವಾಸ್ತವದಲ್ಲಿ ಎಲ್ಲದರಲ್ಲೂ ಸ್ವಲ್ಪ ಅಸತ್ಯ ತುಂಬಿರುತ್ತದೆ.
ಹೆಚ್ಚಿನ ಪ್ರಯೋಜನಕ್ಕೆ ಸ್ವಲ್ಪವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಹೊಂದಾಣಿಕೆ ಜೀವನದಲ್ಲಿ ಮುಖ್ಯ.
೪. ಅಭಿಪ್ರಾಯ ಕೊಡುವಾಗ ಸತ್ಯವಿರಲಿ,ನಿಸ್ವಾರ್ಥವಾಗಿರಲಿ,ನಯವಿರಲಿ ಆದರೆ ಅಹಂಕಾರವಿರಬಾರದು.
೫. ಯೋಗ್ಯಕಾಲದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಂಡು ತತ್ ಕ್ಷಣ ಕಾರ್ಯ ಪ್ರವೃತ್ತರಾಗುವುದು ಜಾಣರ ಲಕ್ಷಣ.
೬. ನಿಸ್ವಾರ್ಥತೆ ಮತ್ತು ಧೀಮಂತಿಕೆ ಯೋಗ್ಯ ನಿರ್ಣಯ ಕೈಗೊಳ್ಳಲು ಇರಬೇಕಾದ ಗುಣಗಳು.
೭. ಜಾಣರ ದುಷ್ಟತನ ಮತ್ತು ದುಷ್ಟರ ಧೀಮಂತಿಕೆ ಅಪಾಯ.
೮. ಕಿವಿಗೆಟುಕದ ಶಬ್ದ,ನಾಲಿಗೆಗೆಟುಕದ ಸವಿ,ಕಣ್ಣಿಗೆಟುಕದ ಬೆಳಕು ಅನುಪಯುಕ್ತ.
೯. ಮನಸ್ಸಿಗೆ ಅಂಟಿಕೊಂಡವರು ಎಲ್ಲದಕ್ಕೂ ಅಂಟಿಕೊಂಡಂತೆ.
೧೦ .ರೂಪಕ್ಕಿಂತ ಸ್ವರೂಪ (ಸಹಜವಾದ ಗುಣ-ಸ್ವಭಾವ)ಕ್ಕೆ ಬೆಲೆ ಕೊಡಬೇಕು.
ಕಾವ್ಯದಲ್ಲಿ ಪದ ಚಮತ್ಕಾರ
ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ ಹರಿಹರರಿಬ್ಬರ ವರ್ಣನೆಯೂ ಇದೆ. ಪ್ರತಿ ಪದದ ಮೊದಲ ಅಕ್ಷರ ಸೇರಿಸಿ ಓದಿದರೆ ಶಿವನ ಸ್ತುತಿಯಾದರೆ, ಮೊದಲ ಅಕ್ಷರವನ್ನು ಬಿಟ್ಟು ಓದಿದರೆ ವಿಷ್ಣುವಿನ ವರ್ಣನೆಯಾಗುತ್ತದೆ. ಇಂಥಹ ಪದ್ಯ ರಚನೆ ಕವಿಯ ಪಾಂಡಿತ್ಯವನ್ನು ಎತ್ತಿ ತೋರುತ್ತದೆ. ಇದರ ಸೊಬಗನ್ನು ನೀವೂ ಸವಿಲೆಂಬುದೇ ನನ್ನ ಆಶಯ. ಇದೇ ರೀತಿಯ ಬೆರಗಿನ ಕಾವ್ಯಗಳು ನಿಮಗೆ ತಿಳಿದಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ.
"ಪಾಯಾತ್, ಕುಮಾರಜನಕ ಶಶಿಖಂಡಮೌಳಿಃ
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ"
ಈ ಪದ್ಯದ ಅರ್ಥ ಹೀಗಿದೆ:
ಪಾಯಾತ್ - ಕಾಪಾಡು
ಕುಮಾರಜನಕ - ಶಿವ, ಮಾರಜನಕ - ವಿಷ್ಣು
ಶಶಿಖಂಡಮೌಳಿಃ - ಚಂದ್ರನನ್ನು ಧರಿಸಿದವನು
ಶಿಖಂಡಮೌಳಿಃ - ನವಿಲುಗರಿ ಧರಿಸಿದವನು
ಶಂಖಪ್ರಭಶ್ಚ - ಬಿಳಿ, ಹಿಮಾಲಯವಾಸಿ,ಕೈಲಾಸವಾಸಿ
ಖಪ್ರಭಶ್ಚ - ನೀಲಿ ಬಣ್ಣದವನು (ಖ-ಆಕಾಶ)
ನಿಧನಶ್ಚ - ಲಯಕಾರಕ, ಧನಶ್ಚ - ಲಕ್ಷ್ಮೀಪತಿ
ಗವೀಶಯಾನಃ - ಬಸವವಾಹನ, ವೀಶಯಾನಃ - ಪಕ್ಷಿವಾಹನ
ಗಂಗಾಂಚ - ಗಂಗೆಯ ಒಡೆಯ, ಗಾಂಚ -ಗೋವುಗಳನ್ನು ಕಾದವನು
ಪನ್ನಗಧರಶ್ಚ - ಹಾವನ್ನು ಧರಿಸಿದವನು, ನಗಧರಶ್ಚ - ಗಿರಿಧರ
ಉಮಾವಿಲಾಸಃ - ಶಿವ, ಮಾವಿಲಾಸಃ - ವಿಷ್ಣು (ಮಾ-ರಮಾ)
ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ - ಪ್ರಥಮಾಕ್ಷರ ಸಹಿತವೂ ರಹಿತವೂ ಆದ ದೇವನೇ ಕಾಪಾಡು.
(ಚಿತ್ರಕೃಪೆ - ಅಂತರ್ಜಾಲ)
ರಸಪ್ರಶ್ನೆ- 1 ರ ಉತ್ತರಗಳು
ಒಗಟುಗಳು:
1. ದೀಪ.
2. ಭೂಮಿ.
3. ನದಿ.
4. ಸೀತಾಫಲಹಣ್ಣು
5. ನವಿಲು
6. ಕಪ್ಪೆ.
7. ನೇರಳೆ ಹಣ್ಣು
8. ಛತ್ರಿ
9. ದಾಳಿಂಬೆ
10.ಎಳನೀರು ಅಥವ ತೆಂಗಿನಕಾಯಿ
ಗಾದೆಗಳು:
1.ತೂತು ಒಲೆ ಕೆಡಿಸಿತು.
2.ಪೂಜಾರಿಗೊಂದು ಎದ್ದ ಕಲ್ಲು.
3.ನೆರೆಗೆ ನಿಂದಕರು ಬೇಕು.
4.ದಳವಾಯಿ ದೊರೆಯಲ್ಲ.
5.ಕಳೆ ಹೆಚ್ಚಿದ ಹೊಲ ಹಾಳು.
6.ಕೆಲಸದಲ್ಲಿ ಕಳ್ಳಿ.
7.ಹರಟೆಗೆ ಹಿಡಿತವಿಲ್ಲ.
8.ನಂದಿಯಂತೆ ಮೂರುವರ್ಷ ಬಾಳುವುದು ಲೇಸು.
9.ಬಿಡು ಅಂದ್ರೆ ಹಾವಿಗೆ ಕೋಪ.
10.ನೆಂಟ ಮನೆಗೆ ಮಾರಿ.
ನುಡಿಗಟ್ಟುಗಳು:
1. ಆನಂದಪಡು, ಜಂಬಪಡು.
2. ಬಹಳ ಕುತೂಹಲದಿಂದಿರು, ಬಹಳ ಕಾತರದಿಂದಿರು.
3. ಯಾಚಿಸು, ಧೈನ್ಯದಿಂದ ಕೇಳು.
4. ಸಂಕುಚಿತ ವಿಚಾರವುಳ್ಳ, ಲೋಕಾನುಭವವಿಲ್ಲದ.
5. ಹೊಣೆ ಹೊರಿಸು.
6. ತಿರಸ್ಕಾರ ತೋರಿಸು.
7. ಅವಮಾನ ಮಾಡು.
8. ಬಹಳ ಅನುಭವಶಾಲಿ.
9. ಮೋಸ ಪಡಿಸು, ಕಷ್ಟ ಕೊಡು.
10.ಬಹಳ ಯಾತನೆಯಾಗು.
ರಸಪ್ರಶ್ನೆ - 1
ಒಗಟುಗಳನ್ನು ಬಿಡಿಸಿ
1. ಅಕ್ಕ ಅಕ್ಕ ಬಾವಿ ನೋಡು
ಬಾವಿಯೊಳಗೆ ನೀರು ನೋಡು
ನೀರಿನೊಳಗೆ ಬಳ್ಳಿ ನೋಡು
ಬಳ್ಳಿಗೊಂದು ಹೂವು ನೋಡು
2. ಬಡಗಿ ಮಾಡಿದ ಬಂಡಿಯಲ್ಲ
ಮನುಷ್ಯ ಮಾಡಿದ ಯಂತ್ರವಲ್ಲ
ಒಂದು ನಿಮಿಷವೂ ಪುರುಸೊತ್ತಿಲ್ಲ
3 .ಕಾಲಿಲ್ಲದೆ ನಡೆಯುವೆನು
ಬಾಯಿಯಿಲ್ಲದೆ ನುಡಿಯುವೆನು
ಓಡಿ ಓಡಿ ನನ್ನ ಊರು ಸೇರುವೆನು
4. ಹಸಿರು ಕೋಟೆ
ಅದರೊಳಗೆ ಬಿಳಿಯ ರಾಜ
ಕದ ತೆರೆದರೆ ಬರುತ್ತಾರೆ ಕರಿ ಸೈನಿಕರು
5. ಕಂಠದಲಿ ಕಪ್ಪುಂಟು ಕರಿಕಂಠನಲ್ಲ
ಗಿಂಟದಲಿ ಜುಟ್ಟುಂಟು ವಿಪ್ರ ತಾನಲ್ಲ
ಮೈಯ್ಯಲ್ಲಿ ಕಣ್ಣುಂಟು ದೇವೇಂದ್ರನಲ್ಲ
6. ಬಾಲವಿಲ್ಲದ ಬಜಾರಿ
ನಾಕ್ಕಾಲಿನ ಕಠಾರಿ
ನೀರಿನಲ್ಲಿರುವ ಸಿಂಗಾರಿ
ಇದ ಹೇಳ್ದೋರ್ಗೆ ಚಿನ್ನದ ಕಠಾರಿ
7. ಹುಟ್ಟುತ್ತಲೆ ಹಸುರುಂಟು ಪಚ್ಚೆ ತಾನಲ್ಲ
ಬೆಳೆಯುತ್ತಲೆ ಕೆಂಪುಂಟು ನವರತ್ನವಲ್ಲ
ಕಡೆಕಡೆಗೆ ಕಪ್ಪುಂಟು ಕಸ್ತೂರಿಯಲ್ಲ
ಇದ ಹೇಳಬಲ್ಲ ಜಾಣರಿಗೆ ಅರಿಯದೇ ಇಲ್ಲ
8. ಮೊಗ್ಗರಳಿ ಹೂವಾಗಿ ಪುಷ್ಪ ತಾನಲ್ಲ
ಹಿಗ್ಗಲಿಸಿ ನೋಡಿದರೆ ಪರಿಮಳವೆ ಇಲ್ಲ
9. ಚಿಕ್ಕ ಚಿಕ್ಕ ಪೆಟ್ಟಿಗೆ
ಚಿನ್ನದ ಪೆಟ್ಟಿಗೆ
ಮುಟ್ಟಿ ತೆಗೆದರೆ ಮುನ್ನೂರು ಪೆಟ್ಟಿಗೆ
10. ಕುಂಬಾರ ಮಾಡಿದ ಮಡಿಕೆಯೇನಾಗಲಿಲ್ಲ
ಅಗಸ ಬಟ್ಟೆ ಒಗೆಯುವ ಮಡುವಾಗಲಿಲ್ಲ
ಸೂರ್ಯ ನೋಡಿದ ನೀರಾಗಲಿಲ್ಲ
ಹಾಗಾದರೆ ನಾನ್ಯಾರು?
ಗಾದೆಗಳ ಮೊದಲ ಭಾಗವನ್ನು ಕೊಡಲಾಗಿದೆ. ಮೊದಲ ಭಾಗವನ್ನು ಪುಷ್ಠೀಕರಿಸುವಂತಿರುವ ಮುಂದಿನ ಭಾಗವನ್ನು ತಿಳಿಸಿ.
1.ಮಾತು ಮನೆ ಕೆಡಿಸಿತು. _________________________.
2.ಅಗಸನಿಗೊಂದು ಬಿದ್ದ ಕಲ್ಲು. ________________________.
3.ಊರಿಗೆ ಹಂದಿ ಬೇಕು. _____________________________.
4.ಎಳೆಗರು ಎತ್ತಲ್ಲ. _________________________________.
5.ಕಪಿ ಹೆಚ್ಚಿದ ತೋಟ ಹಾಳು. ________________________.
6.ಮಾತಿನಲ್ಲಿ ಮಳ್ಳಿ. ________________________________.
7.ನಾಲಿಗೆಗೆ ನೋವಿಲ್ಲ . _____________________________.
8.ಹಂದಿಯಂತೆ ನೂರುವರ್ಷ ಬಾಳುವುದಕ್ಕಿಂತ _______________________________.
9.ಕೊಲ್ಲು ಅಂದ್ರೆ ಕಪ್ಪೆಗೆ ಕೋಪ. _____________________________.
10.ಕುಂಟೆತ್ತು ಹೊಲಕ್ಕೆ ಮಾರಿ .__________________________________.
ನುಡಿಗಟ್ಟಿನ ಅರ್ಥ ತಿಳಿಸಿ.
1. ಆಕಾಶಕ್ಕೇರು
2. ಒಂಟಿ ಕಾಲಿನ ಮೇಲೆ ನಿಲ್ಲು
3. ಕಾಲು ಕಟ್ಟು
4. ಕೂಪ ಮಂಡೂಕ
5. ತಲೆಯ ಮೇಲೆ ಹಾಕು
6. ಮುಖ ಮುರಿ
7. ಮೂಗಿಗೆ ಸುಣ್ಣ ಹಚ್ಚು
8. ಏಳು ಕೆರೆ ನೀರು ಕುಡಿದವ
9. ಚಳ್ಳೆ ಹಣ್ಣು ತಿನ್ನಿಸು
10. ಕಣ್ಣಲ್ಲಿ ರಕ್ತ ಬರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
