ಚೈತನ್ಯ ಚಿತ್ತಾರ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಚೈತನ್ಯ ಚಿತ್ತಾರ ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು - 4
೧.ಕೋಪ ನಾಲಿಗೆಯ ತುದಿಯಲ್ಲಿರಬೇಕು ಆದರೆ ಹೃದಯದಲ್ಲಿ ಪ್ರೀತಿಯಿರಬೇಕು.
೨.ಸಮಸ್ಯೆಯ ಮೂಲ ಮನಸ್ಸು.
ಮನಸ್ಸಿನ ಭಾವನೆಗಳು ನಾಲಿಗೆಯಲ್ಲಿ ಪ್ರತಿಧ್ವನಿಸುತ್ತವೆ.
೩.ಅಹಂಕಾರಿಗಳು ದುರ್ಬಲರು.ತಮ್ಮ ಬಗ್ಗೆಯೇ ಅವರಿಗೆ ವಿಶ್ವಾಸವಿರುವುದಿಲ್ಲ.
ಆದರೆ ಸ್ವಾಭಿಮಾನಿಗಳು ಬಲಿಷ್ಟರು.
೪.ಇತರರು ನಿಮ್ಮ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುವಿರೊ ಹಾಗೆಯೇ
ನೀವು ಅವರ ಬಗ್ಗೆ ನಡೆದುಕೊಳ್ಳಬೇಕು.
೫.ಸೋಲುವೆನೆಂಬ ಭಯವನ್ನು ಜಯಿಸುವುದೇ ನಿಜವಾದ ಗೆಲುವು.
೬.ಕೆಲಸ ಮಾಡುವಾಗ ದಕ್ಷರಾಗಿರಬೇಕು.
ಮಾತನಾಡುವಾಗ ಎಚ್ಚರದಿಂದಿರಬೇಕು.
ಯೋಚಿಸುವಾಗ ದೂರದೃಷ್ಠಿ ಇರಬೇಕು.
೭.ಕಷ್ಟಗಳು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ.
೮.ಉನ್ನತಿಯಾಗಲಿ , ಅವನತಿಯಾಗಲಿ ದೂರದಲ್ಲಿಲ್ಲ.
ಅವರವರ ಕೈಯ್ಯಲ್ಲಿದೆ,ಮನಸ್ಸಿನಲ್ಲಿದೆ.
೯.ಕಷ್ಟಗಳಿಲ್ಲದೆ ಕೆಚ್ಚು ಕೆರಳದು. ಕೆಚ್ಚು ಕೆರಳದೆ ಏನನ್ನೂ ಸಾಧಿಸಲಾಗದು.
೧೦.ನೆನಪುಗಳಿರುವುದು ವಸ್ತುಗಳಲ್ಲಲ್ಲ, ಮನಸ್ಸಿನಲ್ಲಿ.
ಚೈತನ್ಯದ ನುಡಿಗಳು - ಅಲ್ಲಿ ಇಲ್ಲಿ ಹೆಕ್ಕಿದ್ದು - ೩
೧. ಬದುಕಿಗೆ ಕ್ರಾಂತಿಯೆಂಬ ಮಳೆಗಾಲವೂ ಬೇಕು
ಶಾಂತಿಯೆಂಬ ಶರತ್ಕಾಲವೂ ಇರಬೇಕು.
೨. ಒಳಿತು ಬಲಿಷ್ಟವಾಗದೆ ಪ್ರಯೋಜನವಿಲ್ಲ.
೩. ವಾಸ್ತವದಲ್ಲಿ ಎಲ್ಲದರಲ್ಲೂ ಸ್ವಲ್ಪ ಅಸತ್ಯ ತುಂಬಿರುತ್ತದೆ.
ಹೆಚ್ಚಿನ ಪ್ರಯೋಜನಕ್ಕೆ ಸ್ವಲ್ಪವನ್ನು ಕಳೆದುಕೊಳ್ಳಬೇಕಾಗುತ್ತದೆ.
ಈ ಹೊಂದಾಣಿಕೆ ಜೀವನದಲ್ಲಿ ಮುಖ್ಯ.
೪. ಅಭಿಪ್ರಾಯ ಕೊಡುವಾಗ ಸತ್ಯವಿರಲಿ,ನಿಸ್ವಾರ್ಥವಾಗಿರಲಿ,ನಯವಿರಲಿ ಆದರೆ ಅಹಂಕಾರವಿರಬಾರದು.
೫. ಯೋಗ್ಯಕಾಲದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಂಡು ತತ್ ಕ್ಷಣ ಕಾರ್ಯ ಪ್ರವೃತ್ತರಾಗುವುದು ಜಾಣರ ಲಕ್ಷಣ.
೬. ನಿಸ್ವಾರ್ಥತೆ ಮತ್ತು ಧೀಮಂತಿಕೆ ಯೋಗ್ಯ ನಿರ್ಣಯ ಕೈಗೊಳ್ಳಲು ಇರಬೇಕಾದ ಗುಣಗಳು.
೭. ಜಾಣರ ದುಷ್ಟತನ ಮತ್ತು ದುಷ್ಟರ ಧೀಮಂತಿಕೆ ಅಪಾಯ.
೮. ಕಿವಿಗೆಟುಕದ ಶಬ್ದ,ನಾಲಿಗೆಗೆಟುಕದ ಸವಿ,ಕಣ್ಣಿಗೆಟುಕದ ಬೆಳಕು ಅನುಪಯುಕ್ತ.
೯. ಮನಸ್ಸಿಗೆ ಅಂಟಿಕೊಂಡವರು ಎಲ್ಲದಕ್ಕೂ ಅಂಟಿಕೊಂಡಂತೆ.
೧೦ .ರೂಪಕ್ಕಿಂತ ಸ್ವರೂಪ (ಸಹಜವಾದ ಗುಣ-ಸ್ವಭಾವ)ಕ್ಕೆ ಬೆಲೆ ಕೊಡಬೇಕು.
ಚೈತನ್ಯದ ನುಡಿಗಳು..... ಅಲ್ಲಿ ಇಲ್ಲಿ ಹೆಕ್ಕಿದ್ದು - ೨
೧. ಕಾದ ಹೆಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೋಗುತ್ತದೆ.
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ.
ನಾವು ಯಾರ ಸಂಗ ಮಾಡುತ್ತೇವೆಯೊ ಅದರಂತೆ ನಾವಾಗುತ್ತೇವೆ.
೨. ಎರಡು ಒಳ್ಳೆಯ ಮಾತು, ಮುಖದಲ್ಲಿ ಮಂದಹಾಸ ಇವಿಷ್ಟು ಸಾಕು ಇಡೀ ಪರಿಸರವನ್ನು ಸುಂದರವಾಗಿಡಲು.
೩. ಕೋಪ, ಮಾತಿನಲ್ಲಿ ಮತ್ತು ಕೃತಿಯಲ್ಲಿ ವ್ಯಕ್ತವಾಗುವುದು ಬೇಡ. ಅದರಿಂದ ವೃಥಾ ತೊಂದರೆ.
೪. ಅವಶ್ಯಕತೆ ಇದ್ದಾಗ ಅವಶ್ಯಕವಾದುದನ್ನು ಮಾತ್ರ ಮಾತನಾಡಿ.ಅನಾವಶ್ಯಕವಾಗಿ ಮಾತನಾಡಬೇಡಿ.
೫. ನಿಮ್ಮ ಜೀವನ ಮಧುರವಾಗಿರಬೇಕೇ?
ಮಧುರವಾಗಿರುವುದೆಲ್ಲ ಬೇಕೆಂಬ ಬಯಕೆಯಿಂದ ದೂರವಿರಿ.
೬. ಕೀರ್ತಿಯನ್ನು ಎಂದೂ ಹಿಂಬಾಲಿಸದಿರು. ಏಕೆಂದರೆ ಅದು ಎಲ್ಲಾ ದುರ್ಗುಣಗಳಿಗೆ ದಾರಿ.
ಅದು ನಿನ್ನನ್ನೇ ಹಿಂಬಾಲಿಸುವಂತೆ ಸಾಧಿಸು.
೭. ನಮ್ಮಲ್ಲಿ ವಿವೇಕ ಜಾಗೃತವಾದಾಗ ಮಾತ್ರ ನಮ್ಮಿಂದ ಒಂದಷ್ಟು ಒಳ್ಳೆಯ ಕೆಲಸವಾಗುತ್ತದೆ.
೮. ಅಪಾತ್ರರಿಗೆ ಮಾಡಿದ ದಾನ ಒಳ್ಳೆಯ ಫಲವನ್ನು ಕೊಡುವುದಿಲ್ಲ ಬದಲಿಗೆ ನಮ್ಮನ್ನೇ ಸುಡುತ್ತದೆ.
೯. ಸಾಧ್ಯಾಸಾಧ್ಯತೆಗಳನ್ನು ದೇವರಿಗೆ ಬಿಡಿ ಆದರೆ ನಿಮ್ಮ ಪ್ರಯತ್ನ ಮಾತ್ರ ಗಟ್ಟಿಯಾಗಿರಲಿ.
೧೦. ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ವಿಘ್ನ ಕಟ್ಟಿಟ್ಟ ಬುತ್ತಿ. ಇದು ದೇವರು ಹೂಡುವ ಪರೀಕ್ಷೆಯಾಟ.
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ.
ನಾವು ಯಾರ ಸಂಗ ಮಾಡುತ್ತೇವೆಯೊ ಅದರಂತೆ ನಾವಾಗುತ್ತೇವೆ.
೨. ಎರಡು ಒಳ್ಳೆಯ ಮಾತು, ಮುಖದಲ್ಲಿ ಮಂದಹಾಸ ಇವಿಷ್ಟು ಸಾಕು ಇಡೀ ಪರಿಸರವನ್ನು ಸುಂದರವಾಗಿಡಲು.
೩. ಕೋಪ, ಮಾತಿನಲ್ಲಿ ಮತ್ತು ಕೃತಿಯಲ್ಲಿ ವ್ಯಕ್ತವಾಗುವುದು ಬೇಡ. ಅದರಿಂದ ವೃಥಾ ತೊಂದರೆ.
೪. ಅವಶ್ಯಕತೆ ಇದ್ದಾಗ ಅವಶ್ಯಕವಾದುದನ್ನು ಮಾತ್ರ ಮಾತನಾಡಿ.ಅನಾವಶ್ಯಕವಾಗಿ ಮಾತನಾಡಬೇಡಿ.
೫. ನಿಮ್ಮ ಜೀವನ ಮಧುರವಾಗಿರಬೇಕೇ?
ಮಧುರವಾಗಿರುವುದೆಲ್ಲ ಬೇಕೆಂಬ ಬಯಕೆಯಿಂದ ದೂರವಿರಿ.
೬. ಕೀರ್ತಿಯನ್ನು ಎಂದೂ ಹಿಂಬಾಲಿಸದಿರು. ಏಕೆಂದರೆ ಅದು ಎಲ್ಲಾ ದುರ್ಗುಣಗಳಿಗೆ ದಾರಿ.
ಅದು ನಿನ್ನನ್ನೇ ಹಿಂಬಾಲಿಸುವಂತೆ ಸಾಧಿಸು.
೭. ನಮ್ಮಲ್ಲಿ ವಿವೇಕ ಜಾಗೃತವಾದಾಗ ಮಾತ್ರ ನಮ್ಮಿಂದ ಒಂದಷ್ಟು ಒಳ್ಳೆಯ ಕೆಲಸವಾಗುತ್ತದೆ.
೮. ಅಪಾತ್ರರಿಗೆ ಮಾಡಿದ ದಾನ ಒಳ್ಳೆಯ ಫಲವನ್ನು ಕೊಡುವುದಿಲ್ಲ ಬದಲಿಗೆ ನಮ್ಮನ್ನೇ ಸುಡುತ್ತದೆ.
೯. ಸಾಧ್ಯಾಸಾಧ್ಯತೆಗಳನ್ನು ದೇವರಿಗೆ ಬಿಡಿ ಆದರೆ ನಿಮ್ಮ ಪ್ರಯತ್ನ ಮಾತ್ರ ಗಟ್ಟಿಯಾಗಿರಲಿ.
೧೦. ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ವಿಘ್ನ ಕಟ್ಟಿಟ್ಟ ಬುತ್ತಿ. ಇದು ದೇವರು ಹೂಡುವ ಪರೀಕ್ಷೆಯಾಟ.
ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು.
೧.ಪೂರ್ಣ ವಿರಾಮವೇ ಕೊನೆಯಲ್ಲ,ಅದರ ಮುಂದೆ ಸಹ ಬರೆಯಬಹುದು.ಸೋಲೇ ಕೊನೆಯಲ್ಲ, ಅದು ಯಶಸ್ಸಿನ ಆರಂಭವೂ ಆಗಬಹುದು.
೨.ಯಶಸ್ಸಿನ ಕೀಲಿ ಕೈಯನ್ನು ಯಾರೂ ತಯಾರಿಸಿರುವುದಿಲ್ಲ. ಅದನ್ನು ಮಾತ್ರ ನಾವೇ ತಯಾರಿಸಿಕೊಳ್ಳಬೇಕು.ನಮಗೆಂಥ ಕೀಲಿಕೈ ಬೇಕೆಂಬುದನ್ನು ನಿರ್ಧರಿಸುವವರೂ ನಾವೇ.
೩.ನಾವು ಸರಿಯಾಗಿದ್ದಾಗ ಕೋಪಿಸಿಕೊಳ್ಳುವ ಅಗತ್ಯವೇ ಇಲ್ಲ.ತಪ್ಪಿದ್ದಾಗ ಕೋಪಿಸಿಕೊಳ್ಳುವ ಹಕ್ಕೇ ನಮಗಿಲ್ಲ.
೪. ಕೊಳಲಿಗೆ ಹಲವು ತೂತು. ಒಳಗೆಲ್ಲ ಖಾಲಿ.ಆದರೂ ಅದು ಇಂಪಾದ ಸ್ವರವನ್ನು ಹೊಮ್ಮಿಸುವಾಗ ನಾವೇಕೆ ಖಾಲಿ ಎಂದುಕೊಳ್ಳಬೇಕು.ನಮ್ಮ ಜೀವನವೂ ಕೊಳಲಿನಂತಾಗುವುದು ನಮ್ಮ ಕೈಯಲ್ಲೇ ಇದೆ.
೫. ಕೆಳಗೆ ಬಿದ್ದಾಗ ಬಿದ್ದ ಜಾಗವನ್ನು ನೋಡಬೇಡಿ.ಜಾರಿದ್ದೇಲ್ಲಿ ಎಂದು ನೋಡಿ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದೇ ಯಶಸ್ಸು.
೬. ಜೀವನವೆಂದರೆ ಸರಳರೇಖೆಯಂತೆ ನೇರವಲ್ಲ.ಆದರೆ ಜೀವನಪಥವನ್ನು ಸರಳ ಮತ್ತು ನೇರಗೊಳಿಸಿಕೊಳ್ಳಲು ಸಾಧ್ಯವಿದೆ.
೭. ನಿಮ್ಮ ಆಸೆಗಳ ಪಟ್ಟಿಯನ್ನು ಎಂದೂ ಕಡಿಮೆ ಮಾಡಿಕೊಳ್ಳಬೇಡಿ. ಆದನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.
೮. ಸೋತ ನಂತರ ಪ್ರಯತ್ನಿಸದಿರುವುದು ಸೋಲನ್ನು ಒಪ್ಪಿಕೊಂಡಂತೆ.ಪುನಃ ಪುನಃ ಪ್ರಯತ್ನಿಸುವುದು ಸೋಲನ್ನು ಪ್ರಶ್ನಿಸಿದಂತೆ.ಸೋಲನ್ನು ಪ್ರಶ್ನಿಸುವುದು ಗೆಲುವಿಗೆ ಮುನ್ನುಡಿ.
೯. ಎಲ್ಲಾ ಟೀಕೆಗಳಿಗೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅನೇಕ ಸಂದರ್ಭಗಳಲ್ಲಿ ಟೀಕೆ ಮಾಡಿದವರ ಬಂಡವಾಳವೇ ಬಯಲಾಗುತ್ತದೆ.ಈ ಅವಕಾಶಕ್ಕಾಗಿ ಕಾಯುವ ಸಹನೆ ನಮ್ಮಲ್ಲಿರಬೇಕು.
೧೦.ಎಲ್ಲಾ ನಕ್ಷತ್ರಗಳೂ ಹೊಳೆಯಬಹುದು. ಆದರೆ ಒಂದೂ ಸಹ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುವುದಿಲ್ಲ. ಎಲ್ಲರಂತೆ ನೀವಿದ್ದರೆ ನೀವೆಷ್ಟೇ ಶ್ರಮ ಹಾಕಿದರೂ ಪ್ರಯೋಜನವಿಲ್ಲ.ಭಿನ್ನವಾಗಿರಲು ಪ್ರಯತ್ನಿಸಿ.
೨.ಯಶಸ್ಸಿನ ಕೀಲಿ ಕೈಯನ್ನು ಯಾರೂ ತಯಾರಿಸಿರುವುದಿಲ್ಲ. ಅದನ್ನು ಮಾತ್ರ ನಾವೇ ತಯಾರಿಸಿಕೊಳ್ಳಬೇಕು.ನಮಗೆಂಥ ಕೀಲಿಕೈ ಬೇಕೆಂಬುದನ್ನು ನಿರ್ಧರಿಸುವವರೂ ನಾವೇ.
೩.ನಾವು ಸರಿಯಾಗಿದ್ದಾಗ ಕೋಪಿಸಿಕೊಳ್ಳುವ ಅಗತ್ಯವೇ ಇಲ್ಲ.ತಪ್ಪಿದ್ದಾಗ ಕೋಪಿಸಿಕೊಳ್ಳುವ ಹಕ್ಕೇ ನಮಗಿಲ್ಲ.
೪. ಕೊಳಲಿಗೆ ಹಲವು ತೂತು. ಒಳಗೆಲ್ಲ ಖಾಲಿ.ಆದರೂ ಅದು ಇಂಪಾದ ಸ್ವರವನ್ನು ಹೊಮ್ಮಿಸುವಾಗ ನಾವೇಕೆ ಖಾಲಿ ಎಂದುಕೊಳ್ಳಬೇಕು.ನಮ್ಮ ಜೀವನವೂ ಕೊಳಲಿನಂತಾಗುವುದು ನಮ್ಮ ಕೈಯಲ್ಲೇ ಇದೆ.
೫. ಕೆಳಗೆ ಬಿದ್ದಾಗ ಬಿದ್ದ ಜಾಗವನ್ನು ನೋಡಬೇಡಿ.ಜಾರಿದ್ದೇಲ್ಲಿ ಎಂದು ನೋಡಿ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದೇ ಯಶಸ್ಸು.
೬. ಜೀವನವೆಂದರೆ ಸರಳರೇಖೆಯಂತೆ ನೇರವಲ್ಲ.ಆದರೆ ಜೀವನಪಥವನ್ನು ಸರಳ ಮತ್ತು ನೇರಗೊಳಿಸಿಕೊಳ್ಳಲು ಸಾಧ್ಯವಿದೆ.
೭. ನಿಮ್ಮ ಆಸೆಗಳ ಪಟ್ಟಿಯನ್ನು ಎಂದೂ ಕಡಿಮೆ ಮಾಡಿಕೊಳ್ಳಬೇಡಿ. ಆದನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.
೮. ಸೋತ ನಂತರ ಪ್ರಯತ್ನಿಸದಿರುವುದು ಸೋಲನ್ನು ಒಪ್ಪಿಕೊಂಡಂತೆ.ಪುನಃ ಪುನಃ ಪ್ರಯತ್ನಿಸುವುದು ಸೋಲನ್ನು ಪ್ರಶ್ನಿಸಿದಂತೆ.ಸೋಲನ್ನು ಪ್ರಶ್ನಿಸುವುದು ಗೆಲುವಿಗೆ ಮುನ್ನುಡಿ.
೯. ಎಲ್ಲಾ ಟೀಕೆಗಳಿಗೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅನೇಕ ಸಂದರ್ಭಗಳಲ್ಲಿ ಟೀಕೆ ಮಾಡಿದವರ ಬಂಡವಾಳವೇ ಬಯಲಾಗುತ್ತದೆ.ಈ ಅವಕಾಶಕ್ಕಾಗಿ ಕಾಯುವ ಸಹನೆ ನಮ್ಮಲ್ಲಿರಬೇಕು.
೧೦.ಎಲ್ಲಾ ನಕ್ಷತ್ರಗಳೂ ಹೊಳೆಯಬಹುದು. ಆದರೆ ಒಂದೂ ಸಹ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುವುದಿಲ್ಲ. ಎಲ್ಲರಂತೆ ನೀವಿದ್ದರೆ ನೀವೆಷ್ಟೇ ಶ್ರಮ ಹಾಕಿದರೂ ಪ್ರಯೋಜನವಿಲ್ಲ.ಭಿನ್ನವಾಗಿರಲು ಪ್ರಯತ್ನಿಸಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)








