೧. ಕಾದ ಹೆಂಚಿನ ಮೇಲೆ ಹನಿ ನೀರು ಬಿದ್ದರೆ ಆರಿ ಹೋಗುತ್ತದೆ.
ಎಲೆಯ ಮೇಲೆ ಬಿದ್ದರೆ ಹೊಳೆಯುತ್ತದೆ.
ಚಿಪ್ಪಿನೊಳಗೆ ಬಿದ್ದರೆ ಮುತ್ತಾಗುತ್ತದೆ.
ನಾವು ಯಾರ ಸಂಗ ಮಾಡುತ್ತೇವೆಯೊ ಅದರಂತೆ ನಾವಾಗುತ್ತೇವೆ.
೨. ಎರಡು ಒಳ್ಳೆಯ ಮಾತು, ಮುಖದಲ್ಲಿ ಮಂದಹಾಸ ಇವಿಷ್ಟು ಸಾಕು ಇಡೀ ಪರಿಸರವನ್ನು ಸುಂದರವಾಗಿಡಲು.
೩. ಕೋಪ, ಮಾತಿನಲ್ಲಿ ಮತ್ತು ಕೃತಿಯಲ್ಲಿ ವ್ಯಕ್ತವಾಗುವುದು ಬೇಡ. ಅದರಿಂದ ವೃಥಾ ತೊಂದರೆ.
೪. ಅವಶ್ಯಕತೆ ಇದ್ದಾಗ ಅವಶ್ಯಕವಾದುದನ್ನು ಮಾತ್ರ ಮಾತನಾಡಿ.ಅನಾವಶ್ಯಕವಾಗಿ ಮಾತನಾಡಬೇಡಿ.
೫. ನಿಮ್ಮ ಜೀವನ ಮಧುರವಾಗಿರಬೇಕೇ?
ಮಧುರವಾಗಿರುವುದೆಲ್ಲ ಬೇಕೆಂಬ ಬಯಕೆಯಿಂದ ದೂರವಿರಿ.
೬. ಕೀರ್ತಿಯನ್ನು ಎಂದೂ ಹಿಂಬಾಲಿಸದಿರು. ಏಕೆಂದರೆ ಅದು ಎಲ್ಲಾ ದುರ್ಗುಣಗಳಿಗೆ ದಾರಿ.
ಅದು ನಿನ್ನನ್ನೇ ಹಿಂಬಾಲಿಸುವಂತೆ ಸಾಧಿಸು.
೭. ನಮ್ಮಲ್ಲಿ ವಿವೇಕ ಜಾಗೃತವಾದಾಗ ಮಾತ್ರ ನಮ್ಮಿಂದ ಒಂದಷ್ಟು ಒಳ್ಳೆಯ ಕೆಲಸವಾಗುತ್ತದೆ.
೮. ಅಪಾತ್ರರಿಗೆ ಮಾಡಿದ ದಾನ ಒಳ್ಳೆಯ ಫಲವನ್ನು ಕೊಡುವುದಿಲ್ಲ ಬದಲಿಗೆ ನಮ್ಮನ್ನೇ ಸುಡುತ್ತದೆ.
೯. ಸಾಧ್ಯಾಸಾಧ್ಯತೆಗಳನ್ನು ದೇವರಿಗೆ ಬಿಡಿ ಆದರೆ ನಿಮ್ಮ ಪ್ರಯತ್ನ ಮಾತ್ರ ಗಟ್ಟಿಯಾಗಿರಲಿ.
೧೦. ನಾವು ಮಾಡುವ ಎಲ್ಲ ಒಳ್ಳೆಯ ಕೆಲಸಕ್ಕೆ ಆರಂಭದಲ್ಲಿ ವಿಘ್ನ ಕಟ್ಟಿಟ್ಟ ಬುತ್ತಿ. ಇದು ದೇವರು ಹೂಡುವ ಪರೀಕ್ಷೆಯಾಟ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.