ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು.

೧.ಪೂರ್ಣ ವಿರಾಮವೇ ಕೊನೆಯಲ್ಲ,ಅದರ ಮುಂದೆ ಸಹ ಬರೆಯಬಹುದು.ಸೋಲೇ ಕೊನೆಯಲ್ಲ, ಅದು ಯಶಸ್ಸಿನ ಆರಂಭವೂ ಆಗಬಹುದು.

೨.ಯಶಸ್ಸಿನ ಕೀಲಿ ಕೈಯನ್ನು ಯಾರೂ ತಯಾರಿಸಿರುವುದಿಲ್ಲ. ಅದನ್ನು ಮಾತ್ರ ನಾವೇ ತಯಾರಿಸಿಕೊಳ್ಳಬೇಕು.ನಮಗೆಂಥ ಕೀಲಿಕೈ ಬೇಕೆಂಬುದನ್ನು ನಿರ್ಧರಿಸುವವರೂ ನಾವೇ.

೩.ನಾವು ಸರಿಯಾಗಿದ್ದಾಗ ಕೋಪಿಸಿಕೊಳ್ಳುವ ಅಗತ್ಯವೇ ಇಲ್ಲ.ತಪ್ಪಿದ್ದಾಗ ಕೋಪಿಸಿಕೊಳ್ಳುವ ಹಕ್ಕೇ ನಮಗಿಲ್ಲ.

೪. ಕೊಳಲಿಗೆ ಹಲವು ತೂತು. ಒಳಗೆಲ್ಲ ಖಾಲಿ.ಆದರೂ ಅದು ಇಂಪಾದ ಸ್ವರವನ್ನು ಹೊಮ್ಮಿಸುವಾಗ ನಾವೇಕೆ ಖಾಲಿ ಎಂದುಕೊಳ್ಳಬೇಕು.ನಮ್ಮ ಜೀವನವೂ ಕೊಳಲಿನಂತಾಗುವುದು ನಮ್ಮ ಕೈಯಲ್ಲೇ ಇದೆ.

೫. ಕೆಳಗೆ ಬಿದ್ದಾಗ ಬಿದ್ದ ಜಾಗವನ್ನು ನೋಡಬೇಡಿ.ಜಾರಿದ್ದೇಲ್ಲಿ ಎಂದು ನೋಡಿ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದೇ ಯಶಸ್ಸು.

೬. ಜೀವನವೆಂದರೆ ಸರಳರೇಖೆಯಂತೆ ನೇರವಲ್ಲ.ಆದರೆ ಜೀವನಪಥವನ್ನು ಸರಳ ಮತ್ತು ನೇರಗೊಳಿಸಿಕೊಳ್ಳಲು ಸಾಧ್ಯವಿದೆ.

೭. ನಿಮ್ಮ ಆಸೆಗಳ ಪಟ್ಟಿಯನ್ನು ಎಂದೂ ಕಡಿಮೆ ಮಾಡಿಕೊಳ್ಳಬೇಡಿ. ಆದನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.

೮. ಸೋತ ನಂತರ ಪ್ರಯತ್ನಿಸದಿರುವುದು ಸೋಲನ್ನು ಒಪ್ಪಿಕೊಂಡಂತೆ.ಪುನಃ ಪುನಃ ಪ್ರಯತ್ನಿಸುವುದು ಸೋಲನ್ನು ಪ್ರಶ್ನಿಸಿದಂತೆ.ಸೋಲನ್ನು ಪ್ರಶ್ನಿಸುವುದು ಗೆಲುವಿಗೆ ಮುನ್ನುಡಿ.

೯. ಎಲ್ಲಾ ಟೀಕೆಗಳಿಗೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅನೇಕ ಸಂದರ್ಭಗಳಲ್ಲಿ ಟೀಕೆ ಮಾಡಿದವರ ಬಂಡವಾಳವೇ ಬಯಲಾಗುತ್ತದೆ.ಈ ಅವಕಾಶಕ್ಕಾಗಿ ಕಾಯುವ ಸಹನೆ ನಮ್ಮಲ್ಲಿರಬೇಕು.

೧೦.ಎಲ್ಲಾ ನಕ್ಷತ್ರಗಳೂ ಹೊಳೆಯಬಹುದು. ಆದರೆ ಒಂದೂ ಸಹ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುವುದಿಲ್ಲ. ಎಲ್ಲರಂತೆ ನೀವಿದ್ದರೆ ನೀವೆಷ್ಟೇ ಶ್ರಮ ಹಾಕಿದರೂ ಪ್ರಯೋಜನವಿಲ್ಲ.ಭಿನ್ನವಾಗಿರಲು ಪ್ರಯತ್ನಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.