ಚಲನಚಿತ್ರ ಅಂತ್ಯಾಕ್ಷರಿ - ಉತ್ತರಗಳು

ಸನ್ನಿವೇಶ ಸುತ್ತು:-

೧.ಚಿತ್ರ - ಮಯೂರ
  ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
  ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲಾ ಹಾಯಾಗಿ)

೨.ಚಿತ್ರ -  ಬೆಳ್ಳಿಮೋಡ
ಮೂಡಲಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
 ನುಣ್ಣನೆ ಎರಕಾವಾ ಹೊಯ್ದ
 ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ

೩.ಚಿತ್ರ - ಗುರುಶಿಷ್ಯರು
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎಂದೂ ನಿಜವಲ್ಲ.

೪.ಚಿತ್ರ - ಜೀವನ ಚೈತ್ರ 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
 ಸಾಯೊತನಕ ಸಂಸಾರದೊಳಗೆ ಗಂಡಾಗುಂಡಿ
 ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ

೫.ಚಿತ್ರ - ಬಂಧನ
ಬಣ್ಣ ನನ್ನ ಒಲವಿನ ಬಣ್ಣ
ನನ್ನ ....... ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಕನಸಿನ ಬಣ್ಣ

೬.ಚಿತ್ರ - ನಾನೂ ನನ್ನ ಕನಸು
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲ್
 ನಿನ್ನ ಪುಟ್ಟ ಕೈ ನಿನ್ನ ಪುಟ್ಟ ಕಾಲ್

ಅಂತ್ಯ ಪದ ಸುತ್ತು:-

೧.ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ
ಪಯಣಿಗ ನಾನಮ್ಮ

೨.ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ

೩.ಒಲವೆ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

೪.ತುಂತುರು ಅಲ್ಲಿ ನೀರಹಾಡು
ಕಂಪನ ಇಲ್ಲಿ ಪ್ರೀತಿಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

೫.ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

೬.ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು

ಚಿತ್ರಗೀತೆಯಾಗಿ ಕವಿಗಳ ಕವನ ಸುತ್ತು:-

೧.ತೆರೆದಿದೆ ಮನೆ ಓ.. ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯ
ಹೊಸ ಬಾಳನು ತಾ ಅತಿಥಿ

೨.ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

೩.ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯಹೇ ರಸಋಷಿಗಳ ಬೀಡೆ

೪.ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.  

೫. ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೊ ಬಂದು ನನ್ನ ಸೆಳೆದಳು

೬.ಕುಹೂ ಕುಹೂ ಕುಹೂ ಕುಹೂ
 ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ

ಚರಣ - ಪಲ್ಲವಿ ಸುತ್ತು:-

೧.ಹುವ್ವೇ ಹುವ್ವೇ ಹುವ್ವೇ ಹುವ್ವೇ ಹುವ್ವೇ
ನಿನ್ನೀ ನಗುವಿಗೆ ಕಾರಣವೇನೆ
ಸೂರ್ಯನ ನಿಯಮಾನೇ.. ಚಂದ್ರನ ನೆನಪೇನೇ...

೨.ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾಬಂಡಿ
ಇದು ವಿಧಿಯೋಡಿಸುವ ಬಂಡಿ

೩.ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೆ

೪.ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ



ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ ಕಾರ್ಯಕ್ರಮ....!!!

ಈ ದಿನ ಹಾಗೇ ಸುಮ್ಮನೆ ಅಂತ್ಯಾಕ್ಷರಿ ಮಾಡೋಣ ಅನ್ನಿಸಿತು....!!!ಎಲ್ಲವೂ ಸರಳ ಪ್ರಶ್ನೆಗಳು... ಎಲ್ಲಾ ಸುತ್ತುಗಳಿಗೂ ಸೇರಿ ನಿಮಗಿರುವ ಸಮಯ ಹತ್ತು ನಿಮಿಷಗಳು.ಉತ್ತರ ತಿಳಿಸುತ್ತೀರಲ್ವ..???  

ಸನ್ನಿವೇಶ ಸುತ್ತು:- 

ಈ ಸುತ್ತಿನಲ್ಲಿ ಚಿತ್ರದ ಸನ್ನಿವೇಶದ ಬಗ್ಗೆ ಒಂದು ಚಿಕ್ಕ ಮಾಹಿತಿ ನೀಡಿದ್ದೇನೆ. ಆ ಸುಳಿವಿನ ಮೂಲಕ ಚಿತ್ರದ ಹೆಸರು ಮತ್ತು ಹಾಡು ಯಾವುದೆಂದು ಕಂಡು ಹಿಡಿಯಬೇಕು  

1.ಮೊದಲ ಕನ್ನಡ ಸಾಮ್ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕದಂಬರ ಪ್ರಸಿದ್ಧ ರಾಜನ ಕತೆಯ ಚಲನಚಿತ್ರವಿದು.ದುಷ್ಟ ರಾಜನ ಆಡಳಿತದಿಂದ ನೊಂದ ಬಡಜನರ ಕಣ್ಣೀರು ಒರೆಸಿ,ನಿಮ್ಮೊಂದಿಗೆ ನಾನಿದ್ದೇನೆ,ವೈರಿಗಳನ್ನು ಬಡಿದೋಡಿಸುವೆ ಎಂದು ಈ ಹಾಡಿನ ಮೂಲಕ ನಾಯಕ ನಾಡಿನ ಜನರಿಗೆ ಅಭಯ ನೀಡುವ ಹಾಡು.ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಮಂಜುಳ ಪ್ರಧಾನ ಪಾತ್ರದಲ್ಲಿದ್ದಾರೆ.

2.ತ್ರಿವೇಣಿ ಕಾದಂಬರಿ ಆಧಾರಿತ ,ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮೊದಲ ಚಿತ್ರ.ಈ ಚಿತ್ರದ ನಾಯಕಿ ಕಾಫಿ ಎಸ್ಟೇಟ್ ಮಾಲೀಕರ ಒಬ್ಬಳೇ ಮಗಳು.ಬೆಳಗ್ಗೆ ತನ್ನ ತೋಟವನ್ನೆಲ್ಲ ಸುತ್ತಾಡುತ್ತಾ ಪೂಜೆಗಾಗಿ ಹೂಗಳನ್ನು ಕೀಳುತ್ತಾ, ದ ರಾ ಬೇಂದ್ರೆಯವರು ಬರೆದ ಈ ಗೀತೆಯನ್ನು ಹಾಡುತ್ತಾಳೆ.ಕಲ್ಪನಾ ಚಿತ್ರದ ನಾಯಕಿ. 

3.ಶಾಪಕ್ಕೆ ಗುರಿಯಾದ ಏಳು ಜನ ಗಂಧರ್ವರು ಪೆದ್ದ ಶಿಷ್ಯರಾಗಿ ಭೂಮಿಗೆ ಬರುತ್ತಾರೆ. ಈ ಪೆದ್ದ ಶಿಷ್ಯರು ಹಾಡುವ ಜಾಣರ ಹಾಡಿದು.ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ವಿಷ್ಣುವರ್ಧನ್, ಮಂಜುಳ ಇದ್ದಾರೆ.

4.ವಿಶ್ವ ವಿಖ್ಯಾತ ಜೋಗವನ್ನು ಕುರಿತಾದ ಈ ಹಾಡನ್ನು ರಾಜ್ ಕುಮಾರ್ ಹಾಡಿದ್ದಾರ‍ೆ.

5.ವಿಷ್ಣುವರ್ಧನ್ ಮತ್ತು ಸುಹಾಸಿನಿ ಓಕುಳಿಯಾಡುತ್ತಾ ಹಾಡಿದ ಈ ಹಾಡು ನಾಯಕ ಕಂಡ ಕನಸು ಮಾತ್ರ.

6.ತನಗೊಂದು ಮಗು ಹುಟ್ಟುವುದರೊಂದಿಗೆ ಅಪ್ಪನೂ ಹುಟ್ಟುತ್ತಾನೆ.ಅದು ಬೆಳೆದಂತೆ ತಾನೂ ಬೆಳೆಯುತ್ತಾನೆ ಎನ್ನುವ ಈ ಚಿತ್ರದ ತಂದೆ ತನ್ನ ಮಗಳು ಹುಟ್ಟಿದಾಗ ಹಾಡುವ ಕನಸಿನ ಹಾಡು.


ಅಂತ್ಯ ಪದ ಸುತ್ತು:- 

ಚಿತ್ರಗೀತೆಯ ಪಲ್ಲವಿಯ ಸಾಲಿನ ಕೊನೆಯ ಪದವನ್ನು ಕೊಟ್ಟಿದ್ದೇನೆ.ಹಾಡು ಯಾವುದೆಂದು ಗುರುತಿಸಿ.

1............ ಕಡಲಲ್ಲಿ
........... ದೋಣಿಯಲಿ
........... ನಾನಮ್ಮ

2................. ವೀರರಮಣಿಯ
................. ವೀರನಾರಿಯ
................. ಹಾಡುವೆ

3........... ಸಾಕ್ಷಾತ್ಕಾರ
........... ಮಮಕಾರ
........... ಮಮಕಾರ

4............ ನೀರಹಾಡು
............ ಪ್ರೀತಿಹಾಡು
............ ಇರುಳಿರಲಿ 
............ ಹೇಗಿರಲಿ
............ ನೀ ತುಂಬಿದೆ

5..................... ಬದುಕಿರಲಾರೆ
..................... ನಾನಿರಲಾರೆ
..................... ತಾಳಲಾರೆ
..................... ಸಹಿಸಲಾರೆ 

6.............. ಎಲ್ಲಿದೆ
.............. ಕೊನೆಯಿದೆ
.............. ಕಾಣುವೆ
...............ನಿಧಾನಿಸು



ಚಿತ್ರಗೀತೆಯಾಗಿರುವ  ಕವಿಗಳ ಕವನ ಸುತ್ತು:-

1.ಕುವೆಂಪು ರವರು ಬರೆದ "ಹೊಸಬೆಳಕು" ಚಿತ್ರದ ಗೀತೆಯನ್ನು ಹೇಳಿ.

2."ಶರಪಂಜರ" ಚಿತ್ರದ ದ ರಾ ಬೇಂದ್ರೆ ವಿರಚಿತ ಗೀತೆ ಹೇಳಿ.

3.ಕುವೆಂಪು ವಿರಚಿತ ನಮ್ಮ ನಾಡಗೀತೆಯೂ ಚಲನಚಿತ್ರ ಗೀತೆಯಾಗಿದೆ. ಅದನ್ನು ಹೇಳಿ.

4.ದ ರಾ ಬೇಂದ್ರೆಯವರ ಜನಪ್ರಿಯ ಯುಗಾದಿಯ ಹಾಡನ್ನು ಹೇಳಿ.

5.ಗೌರಿ ಚಿತ್ರದಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಬರೆದ ಕವನವನ್ನು ಹೇಳಿ.

6.ಕುವೆಂಪು ರವರು ಬರೆದ ಮನ್ನಾಡೆ ಹಾಡಿದ ಚಲನಚಿತ್ರ ಗೀತೆಯನ್ನು ಹೇಳಿ.


ಚರಣ - ಪಲ್ಲವಿ ಸುತ್ತು:- 
ಚಿತ್ರಗೀತೆಯ ಚರಣದ ಸಾಹಿತ್ಯವನ್ನು ನೋಡಿ ಪಲ್ಲವಿಯನ್ನು ಹೇಳಿ

1.ಆಭರಣದ ಅಂಗಡಿಗೆ ಹೋಗೋಣ ಗಿಳಿಮರಿಯೆ
ಮುದ್ದಾದ ಮೂಗಿಗೆ ಮೂಗುತಿ ಹಾಕುವೆ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೆ
ಸಿಂಗಾರ ಮಾಡಲು ನಿನ್ನಂತೆ ನನ್ನನು
ಮುಗಿಲೆ ಓ ಮುಗಿಲೆ ಕೆನ್ನೆ ಕೆಂಪು ಏಕೆ
ನಿನ್ನಾ ನೋಡೋಕೆ ನಲ್ಲ ಬರುವನೇನೆ
ಗಾಳಿಯೇ ಕಂಪನು ಕದ್ದೊಯ್ವೆ ಎಲ್ಲಿಗೆ

2.ಕಾಶಿಲೀ ಸ್ನಾನ ಮಾಡು 
ಕಾಶ್ಮೀರ ಸುತ್ತಿ ನೋಡು
ಜೋಗಾದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತಾ ಎಲ್ಲೋರನ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ
ಹಾಡೋಕೆ ಒಂದೇ ಭಾಷೆ ಕನ್ನಡ... ಕನ್ನಡ..ಕಸ್ತೂರಿ ಕನ್ನಡ

3.ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕರೆ ಬಂದಿದೆ.

4.ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ