ಚೈತನ್ಯದ ನುಡಿಗಳು - ಅಲ್ಲಿ ಇಲ್ಲಿ ಹೆಕ್ಕಿದ್ದು - ೩


೧. ಬದುಕಿಗೆ ಕ್ರಾಂತಿಯೆಂಬ ಮಳೆಗಾಲವೂ ಬೇಕು
    ಶಾಂತಿಯೆಂಬ ಶರತ್ಕಾಲವೂ ಇರಬೇಕು.

೨. ಒಳಿತು ಬಲಿಷ್ಟವಾಗದೆ ಪ್ರಯೋಜನವಿಲ್ಲ.

೩. ವಾಸ್ತವದಲ್ಲಿ ಎಲ್ಲದರಲ್ಲೂ ಸ್ವಲ್ಪ ಅಸತ್ಯ ತುಂಬಿರುತ್ತದೆ.
    ಹೆಚ್ಚಿನ ಪ್ರಯೋಜನಕ್ಕೆ ಸ್ವಲ್ಪವನ್ನು ಕಳೆದುಕೊಳ್ಳಬೇಕಾಗುತ್ತದೆ.
    ಈ ಹೊಂದಾಣಿಕೆ ಜೀವನದಲ್ಲಿ ಮುಖ್ಯ.

೪. ಅಭಿಪ್ರಾಯ ಕೊಡುವಾಗ ಸತ್ಯವಿರಲಿ,ನಿಸ್ವಾರ್ಥವಾಗಿರಲಿ,ನಯವಿರಲಿ ಆದರೆ ಅಹಂಕಾರವಿರಬಾರದು.

೫. ಯೋಗ್ಯಕಾಲದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಂಡು ತತ್ ಕ್ಷಣ ಕಾರ್ಯ ಪ್ರವೃತ್ತರಾಗುವುದು ಜಾಣರ ಲಕ್ಷಣ.

೬. ನಿಸ್ವಾರ್ಥತೆ ಮತ್ತು ಧೀಮಂತಿಕೆ ಯೋಗ್ಯ ನಿರ್ಣಯ ಕೈಗೊಳ್ಳಲು ಇರಬೇಕಾದ ಗುಣಗಳು.

೭. ಜಾಣರ ದುಷ್ಟತನ ಮತ್ತು ದುಷ್ಟರ ಧೀಮಂತಿಕೆ ಅಪಾಯ.

೮. ಕಿವಿಗೆಟುಕದ ಶಬ್ದ,ನಾಲಿಗೆಗೆಟುಕದ ಸವಿ,ಕಣ್ಣಿಗೆಟುಕದ ಬೆಳಕು ಅನುಪಯುಕ್ತ.

೯. ಮನಸ್ಸಿಗೆ ಅಂಟಿಕೊಂಡವರು ಎಲ್ಲದಕ್ಕೂ ಅಂಟಿಕೊಂಡಂತೆ.

೧೦ .ರೂಪಕ್ಕಿಂತ ಸ್ವರೂಪ (ಸಹಜವಾದ ಗುಣ-ಸ್ವಭಾವ)ಕ್ಕೆ ಬೆಲೆ ಕೊಡಬೇಕು.

4 ಕಾಮೆಂಟ್‌ಗಳು:

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.