ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು - 4


೧.ಕೋಪ ನಾಲಿಗೆಯ ತುದಿಯಲ್ಲಿರಬೇಕು ಆದರೆ ಹೃದಯದಲ್ಲಿ ಪ್ರೀತಿಯಿರಬೇಕು.

೨.ಸಮಸ್ಯೆಯ ಮೂಲ ಮನಸ್ಸು.
   ಮನಸ್ಸಿನ ಭಾವನೆಗಳು ನಾಲಿಗೆಯಲ್ಲಿ ಪ್ರತಿಧ್ವನಿಸುತ್ತವೆ.

೩.ಅಹಂಕಾರಿಗಳು ದುರ್ಬಲರು.ತಮ್ಮ ಬಗ್ಗೆಯೇ ಅವರಿಗೆ ವಿಶ್ವಾಸವಿರುವುದಿಲ್ಲ.
   ಆದರೆ ಸ್ವಾಭಿಮಾನಿಗಳು ಬಲಿಷ್ಟರು.

೪.ಇತರರು ನಿಮ್ಮ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುವಿರೊ ಹಾಗೆಯೇ
   ನೀವು ಅವರ ಬಗ್ಗೆ  ನಡೆದುಕೊಳ್ಳಬೇಕು.

೫.ಸೋಲುವೆನೆಂಬ ಭಯವನ್ನು ಜಯಿಸುವುದೇ ನಿಜವಾದ ಗೆಲುವು.

೬.ಕೆಲಸ ಮಾಡುವಾಗ ದಕ್ಷರಾಗಿರಬೇಕು.
   ಮಾತನಾಡುವಾಗ ಎಚ್ಚರದಿಂದಿರಬೇಕು.
   ಯೋಚಿಸುವಾಗ ದೂರದೃಷ್ಠಿ ಇರಬೇಕು.

೭.ಕಷ್ಟಗಳು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ.

೮.ಉನ್ನತಿಯಾಗಲಿ , ಅವನತಿಯಾಗಲಿ ದೂರದಲ್ಲಿಲ್ಲ.
   ಅವರವರ ಕೈಯ್ಯಲ್ಲಿದೆ,ಮನಸ್ಸಿನಲ್ಲಿದೆ.

೯.ಕಷ್ಟಗಳಿಲ್ಲದೆ ಕೆಚ್ಚು ಕೆರಳದು. ಕೆಚ್ಚು ಕೆರಳದೆ ಏನನ್ನೂ ಸಾಧಿಸಲಾಗದು.

೧೦.ನೆನಪುಗಳಿರುವುದು ವಸ್ತುಗಳಲ್ಲಲ್ಲ, ಮನಸ್ಸಿನಲ್ಲಿ.

2 ಕಾಮೆಂಟ್‌ಗಳು:

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.